“ಹರಿದಾಸ ಪಿತಾಮಹ”ಶ್ರೀ ಶ್ರೀಪಾದರಾಜರು
"ನಮಃ ಶ್ರೀಪಾದರಾಜಾಯ| ನಮಸ್ತೇ ವ್ಯಾಸಯೋಗಿನೇ|
ನಮಃ ಪುರಂದರಾರ್ಯಾಯ| ವಿಜಯರಾಜಾಯ ನಮಃ|

ಶ್ರೀಪಾದರಾಜರ ಶಿಷ್ಯ ಶ್ರೇಷ್ಠರಾದ ವ್ಯಾಸರಾಯರು
ತಮ್ಮ ಗುರುಗಳನ್ನು ಕುರಿತು ರಚಿಸಿರುವ ಅನೇಕ
ರಚನೆಗಳು, ವಾದಿರಾಜರ ಕೀರ್ತನೆಗಳು ಹಾಗೂ ಸಂಸ್ಕøತದ
ಶ್ರೀಪಾದರಾಜ ಗುರುರಾಜ ಸ್ತೋತ್ರ, ಮತ್ತು
ವಿಜಯದಾಸರು ರಚಿಸಿರುವ ಶ್ರೀಪಾದರಾಜರ ಸುಳಾದಿ ಮುಂತಾದವುಗಳು ಶ್ರೀ
ಪಾದರಾಜರ ಬದುಕಿನ ಮೇಲೆ ನಿಶ್ಚಿತ
ಬೆಳಕನ್ನು ಬೀರುತ್ತವೆ. ಅಂತೆಯೇ ಶ್ರೀನಿಧಿತೀರ್ಥರ “ಶ್ರೀಪಾದರಾಜಾಷ್ಟಕ”
ಮತ್ತು ಭೀಮಾಚಾರ್ಯರು ರಚಿಸಿರುವ “ಶ್ರೀ ಪೂರ್ಣಬೋಧ ಗುರುವಂಶ
ಕಲ್ಪತರು” ಮುಂತಾದ ಸಂಸ್ಕøತ
ಕೃತಿಗಳೂ ಸಹ ಅವರ ಯತ್ಯಾಶ್ರಮದ
ನಂತರದ ವಿಶೇಷ ಸಂಗತಿಗಳನ್ನು ವರ್ಣಮಯವಾಗಿ
ಚಿತ್ರಿಸಿವೆ. ಶ್ರೀಪಾದರಾಜರು ಸನ್ಯಾಸ ಸ್ವೀಕರಿಸುವ ಮುಂಚಿನ
ಪ್ರಸಂಗವೊಂದನ್ನು ಬೇಲೂರು ಕೇಶವದಾಸರು ಸುದೀರ್ಘವಾಗಿ,
ಆಕರ್ಷಕವಾಗಿ ತಮ್ಮ “ಕರ್ನಾಟಕ ಭಕ್ತಚರಿತೆ”ಯಲ್ಲಿ ಚಿತ್ರಿಸಿದ್ದಾರೆ.
ದಾಸಸಾಹಿತ್ಯ ಸಾಮ್ರಾಜ್ಯ ಸ್ಥಾಪಕರಾದ ಶ್ರೀಪಾದರಾಜರ ಪೂರ್ವಾಶ್ರಮದ ಹೆಸರು “ಲಕ್ಷ್ಮೀನಾರಾಯಣ” ಎಂಬುದಾಗಿತ್ತು.
ತಂದೆ ಶೇಷಗಿರಿಯಪ್ಪ ಹಾಗೂ ತಾಯಿ ಗಿರಿಯಮ್ಮ.
ಇವರ ಪುತ್ರನಾಗಿ ಚನ್ನಪಟ್ಟಣ ತಾಲೂಕಿನ ಅಬ್ಬೂರಿನಲ್ಲಿ ಕ್ರಿ.ಶ.1404ರಲ್ಲಿ ಜನಿಸಿದರು.
ಅವರ ಸ್ಥಿತಿ-ಗತಿ ಅಷ್ಟಕಷ್ಟೆಯಾಗಿತ್ತು.
ಒಮ್ಮೆ ಸ್ವರ್ಣವರ್ಣತೀರ್ಥ ಎಂಬ ಸ್ವಾಮಿಗಳು ಸಂಚಾರಮಾರ್ಗವಾಗಿ
ಅಬ್ಬೂರಿನ ಬಳಿ ಬಂದಾಗ ದನಕರುಗಳನ್ನು
ಹೊಡೆದುಕೊಂಡು ಹೋಗುತ್ತಿದ್ದ ಈ ಬಾಲಕನನ್ನು ಕಂಡು
"ಮಗು ಅಬ್ಬೂರು ಇನ್ನೂ ಎಷ್ಟು
ದೂರವಿದೆಯಪ್ಪ? ಎಂದು ಕೇಳಲು, ಬಾಲಕನು,
“ಇಗೋ ನನ್ನನ್ನು ನೋಡಿ, ದನಗಳನ್ನು ನೋಡಿ,
ಸೂರ್ಯನನ್ನು ನೋಡಿ. ಎಷ್ಟು ದೂರವೋ
ಗೊತ್ತಾಗುತ್ತದೆ” ಎಂದು ಚಮತ್ಕಾರವಾಗಿ ಉತ್ತರಿಸಿದ
ಈ ಬಾಲಕನಲ್ಲಿ ವಿಶಿಷ್ಟ
ಪ್ರತಿಭೆಯನ್ನು ಗುರುತಿಸುತ್ತಾರೆ. ಮುಂದೆ ಸ್ವರ್ಣವರ್ಣತೀರ್ಥರ ಆಶ್ರಯದಲ್ಲಿ
ಲಕ್ಷ್ಮೀನಾರಾಯಣರ ಬ್ರಹ್ಮೋಪನಯನ, ವಿದ್ಯಾಭ್ಯಾಸ ಇವುಗಳ ನಂತರ ಸಂನ್ಯಾಸ
ದೀಕ್ಷೆಯನ್ನು ಕೊಟ್ಟು ಪೀಠಾಧಿಕಾರಕ್ಕೆ ತಕ್ಕ
ವೇದಾಂತ ವ್ಯಾಸಂಗಕ್ಕಾಗಿ ಲಕ್ಷ್ಮೀನಾರಾಯಣತೀರ್ಥರನ್ನು ಸುಪ್ರಸಿದ್ಧರಾದ ರಾಘವೇಂದ್ರ ಮಠದ ಪೂರ್ವಪೀಳಿಗೆಯ ವಿಬುಧೇಂದ್ರ
ತೀರ್ಥರಲ್ಲಿಗೆ ಕಳುಹಿಸಿಕೊಟ್ಟರು.

ಕೆಲದಿನಗಳಲ್ಲೆ ಸ್ವರ್ಣವರ್ಣತೀರ್ಥರು ವೃಂದಾವನಸ್ಥರಾಗುತ್ತಾರೆ. ಪದ್ಮನಾಭತೀರ್ಥರ ಮಠದ ಸರ್ವಾಧಿಪತ್ಯವೂ ಶ್ರೀಪಾದರಾಜರದಾಯಿತು.
ಶ್ರೀರಂಗದಲ್ಲಿ ಹಲವು ವರ್ಷಗಳಿದ್ದು, ಸಂಚಾರ
ಹೊರಟು ಮುಳುಬಾಗಿಲಿಗೆ ಬಂದು
ಅಲ್ಲಿನ ಮಹತ್ವವರಿತು ಅಲ್ಲಿಯೇ ಮಠವನ್ನು ಸ್ಥಿರವಾಗಿ
ಸ್ಥಾಪಿಸಿದರು. ಮುಳುಬಾಗಿಲು ವಿಜಯನಗರದ ಅರಸರ ಅಧಿಪತ್ಯಕ್ಕೆ ಒಳಪಟ್ಟು
ತುಂಬಾ ಪ್ರಸಿದ್ಧವಾಗಿತ್ತು. ಕನ್ನಡದಲ್ಲಿ ಸಾಮಾನ್ಯ ಜನರಿಗೆ ತಿಳಿಯುವಂತೆ
ಭಾಗವತದ ಕಥೆಗಳು, ಮಹಾಭಾರತ, ರಾಮಾಯಣಗಳು
ಇವೇ ಮೊದಲಾದವನ್ನು ಕನ್ನಡೀಕರಿಸಿ ಹಾಡುಗಳನ್ನಾಗಿ ಪರಿವರ್ತಿಸಿ ಪೂಜಾ ಸಮಯದಲ್ಲಿ ಭಾಗವತರ
ಮುಖೇನ ಹಾಡಿಸುವ ಪದ್ಧತಿಯನ್ನು ಜಾರಿಗೆ
ತಂದರು. “ರಂಗ ವಿಠಲ” ಅಂಕಿತದೊಂದಿಗೆ
ಅನೇಕ ಕೀರ್ತನೆಗಳನ್ನು ರಚಿಸಿದರು. ಸ್ವತಃ ಭ್ರಮರಗೀತೆ, ವೇಣುಗೀತೆ,
ಗೋಪಿಗೀತೆಗಳಂಥ ಭಕ್ತಿಗೀತೆಗಳನ್ನು ಹಾಗೂ ಶ್ರೀ ವಾಯುದೇವರ
ಮೂರು ಅವತಾರಗಳನ್ನು ವರ್ಣಿಸುವ “ಶ್ರೀಮಧ್ವನಾಮ” ವನ್ನು ರಚಿಸಿದ್ದಾರೆ.
ಇಂಥಹ ಮಧ್ವನಾಮದ ಪಠಣದಿಂದ
ಸಿಗುವ ಫಲವನ್ನು ಜಗನ್ನಾಥದಾಸರು ತಮ್ಮ
ಫಲಸ್ತುತಿಯಲ್ಲಿ “ಪುತ್ರರಿಲ್ಲದವರು ಸತ್ಪುತ್ರರೈದುವರು ಸರ್ವತ್ರದಲಿ ದಿಗ್ವಿಜಯವಹುದು ಸಕಲ ಶತ್ರುಗಳು ಕೆಡುವರು
ಅಪಮೃತ್ಯು ಬರಲಂಜುವದು ಸೂತ್ರನಾಮಕನ ಸಂಸ್ತುತಿ ಮಾತ್ರದಿ” ಬಣ್ಣಿಸುತ್ತಾರೆ.
ಶ್ರೀಪುರಂದರದಾಸರ ಸುಪುತ್ರರಾದ ಮಧ್ವಪತಿದಾಸರು ತಮ್ಮ ಉಗಾಭೋಗದಲ್ಲಿ “ವರಧ್ರುವನ
ಅವತಾರ ಶ್ರೀಪಾದರಾಯರು” ಎನ್ನುತ್ತಾರೆ. ಇವರು ಧ್ರುವರಾಜನ ಅಂಶಜರು.
ಇವರ ಮಹಿಮೆ ಅಪಾರವಾದುದು. ಅನೇಕ
ಉಗಾಭೋಗಗಳು, ಕೀರ್ತನೆಗಳು, ಸುಳಾದಿಗಳು, ವೃತ್ತನಾಮ, ದಂಡಕಗಳೆಂಬ ಪ್ರಕಾರಗಳನ್ನು ಮಾಡಿದ್ದಾರೆ. ಶ್ರೀಪಾದರಾಜರ ಕನ್ನಡ ಕೃತಿಗಳಲ್ಲಿ ಪದಲಾಲಿತ್ಯ,
ಅಲಂಕಾರ ಪ್ರೌಢಿಮೆ, ಶೃಂಗಾರ, ಶಾಂತಿ, ಭಕ್ತಿರಸಗಳ
ನಿರೂಪಣೆ ಇವು ಓದುಗರ ಚಿತ್ತವನ್ನೂ
ಹೃದಯವನ್ನು ಆಕರ್ಷಿಸುವವು. ಮತ್ತು ಸುಪ್ರಸಿದ್ಧವಾಗಿವೆ.
ಶ್ರೀಪಾದರಾಜರ ಮಹಿಮೆ ಅಪಾರವಾದುದು. ಶ್ರೀಪಾದರಾಜರು
ಎಲ್ಲಿದ್ದರೂ ಅರವತ್ನಾಲ್ಕು ಬಗೆಯ ಪದಾರ್ಥಗಳನ್ನೇ ಮಾಡಿಸಿ
ನೈವೇದ್ಯ ಮಾಡಿ ಭೀಕ್ಷಾಸ್ವೀಕಾರ ಮಾಡುತ್ತಿದ್ದರು.
ಭೀಮರಥೀತೀರದಲ್ಲಿ ಭೂಗರ್ಭದಲ್ಲಡಗಿದ್ದ ಸ್ವರ್ಣಪೀಠಿಕೆಯೊಂದನ್ನು ಸ್ವಪ್ನ ಸೂಚನೆಯಿಂದ ತೆಗೆಸಿ
ಅದರಲ್ಲಿ ದೊರೆತ ರಂಗವಿಠಲದೇವರನ್ನು ಪೂಜೆಗೆ
ಇಟ್ಟುಕೊಂಡರು. ಕೋಲಾರ ಜಿಲ್ಲೆಯ ಮುಳುಬಾಗಿಲಿನಲ್ಲಿ
ಶ್ರೀಪಾದರಾಜರು ಭಕ್ತಜನರ ಕೋರಿಕೆಯಂತೆ ಗಂಗೆಯನ್ನು
ಸ್ತೋತ್ರ ಮಾಡಿ ನೃಸಿಂಹ ತೀರ್ಥದಲ್ಲೇ
ಆಕೆ ಅವತರಿಸುವಂತೆ ಮಾಡಿ ಎಲ್ಲರಿಗೂ ಗಂಗಾ
ಸ್ನಾನವನ್ನು ಮಾಡಿಸಿದರು. ಹೀಗೆ ಇವರ ಮಹಿಮೆಗಳ
ಪಟ್ಟಿಯನ್ನು ಮಾಡುತ್ತಾ ಹೋದರೆ ಮುಗಿಯುವದಿಲ್ಲ.

ಕ್ರಿ.ಶ 1502ರಲ್ಲಿ
ವೃಂದಾವನಸ್ಥರಾದ ಶ್ರೀಪಾದರಾಜರು ಭಾಗವತ ಧರ್ಮ ಕನ್ನಡ
ಭಕ್ತಿ ಸಾಹಿತ್ಯಗಳಿಗೆ ಜೀವತುಂಬಿ ಧೃವತಾರೆಯಂತೆ ಬಾಳಿ, ಬೆಳಗಿದ್ದಾರೆ. ಗುಣನಿಧಿ
ಶ್ರೀಪಾದರಾಜರನ್ನು ಜ್ಞಾನಶ್ರೇಷ್ಠರ ಗುಣಗಾನವು ಜ್ಞಾನಜ್ಯೇಷ್ಠರಿಂದ ಮಾಡಲ್ಪಟ್ಟರೇನೇ ಚಂದ. ಅದನ್ನು ನುಡಿದವನಿಗೆ
ದೊರೆಯುವದು ಆನಂದ. ಎಂದು ಜ್ಞಾನಿಗಳು
ಹೇಳುತ್ತಾರೆ. ಪ್ರಕೃತ “ಶ್ರೀಪಾದರಾಯ ಗುರುವೇ”
ಎಂದು ಪ್ರಾರಂಭವುಳ್ಳ ಸುಳಾದಿ ಶ್ರೀ ವಿಜಯರಾಯರ
ಕೃತಿಯನ್ನು ಓದಿ ನೋಡುವಾಗ ಶ್ರೀಪಾದರಾಜರ
ಒಂದೊಂದು ಗುಣವೂ ರಮಾರಮಣನಿಗೆ ಎಷ್ಟು
ಪ್ರೀತಿ ಎಂಬುದು ಅರ್ಥವಾಗದೆ ಇರದು.
ಜ್ಯೇಷ್ಠ ಶುದ್ಧ ಚತುರ್ದಶಿದಿನ
ಈ ಪುಣ್ಯಾತ್ಮರ ಪುಣ್ಯದಿನ.
ಕೋಲಾರ ಜಿಲ್ಲೆಯ ಮುಳುಬಾಗಿಲಿನಲ್ಲಿ ಶ್ರೀಪಾದರಾಜರ
ಆರಾಧನೆಯನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತದೆ.
ಶ್ರೀಪಾದರಾಜರನ್ನು ನೆನೆಸಿದವರು ಧನ್ಯ. ಅವರ ಸ್ಮರಣೆ
ನಿರಂತರವಾಗಿರಲಿ. ಶ್ರೀ ಪಾದರಾಜರ ಮಧುರ
ಸ್ಮರಣೆಗಾಗಿ ನಮಗೆ ನಿಲುಕಿದ ಅವರ
ಮಾಡಿದ ಕೃತಿ ಬರೆದು-ಓದಿ-ಆನಂದಿಸೋಣ.
ಉಗಾಭೋಗ
“ಬಲ್ಲವನು ಎಲ್ಲವನು ಹರಿಯಿರಲು
ಭಜಿಸದೆ|
ಕ್ಷುಲ್ಲದೇವರ ಬೇಡಿ
ಸುಖವ
ಬಯಸುವೆ
ನೀನು|
ಕಲ್ಲುಗೋವಿನ ಪಾಲ
ಕರುವು
ಬಯಸಿದಂತೆ
ಹಲ್ಲು ಹೋಹದನರಿಯ
ಅಕ್ಕಟಕಟ
ಬಲ್ಲಿದ ದೈವ
ಶ್ರೀರಂಗ
ವಿಠಲನು
ಕೈವಲ್ಯವನೇ ಕೊಟ್ಟು
ಸಂತೈಸುವನು
ಭಜಿಸೋ||”
ಎಂದ
ಅವರ ಹಿತೋಪದೇಶವನ್ನು ಮನದಟ್ಟು ಮಾಡಿಕೊಂಡು-
“ಕಲಿಕಾಲಕೆ ಸಮಯುಗವಿಲ್ಲವಯ್ಯ|
ಕಲುಷಹರಿಸಿ ಕೈವಲ್ಯವೀವುದಯ್ಯ
ಸಲೆ ನಾಮ ಕೀರ್ತನೆ ಸ್ಮರಣೆ ಸಾಕಯ್ಯ
ಸ್ಮರಿಸಲು ಸಾಯುಜ್ಯ ಪದವೀವುದಯ್ಯ
ಬಲವಂತ ಶ್ರೀರಂಗವಿಠಲನ ನೆನೆದರೆ ಕಲಿಯುಗವೇ ಕೃತಯುಗವಾಗುವುದಯ್ಯ.”
ಎಂದು ಅವರಿತ್ತ ಧೈರ್ಯದಿಂದ
ಬಾಳೋಣ.
||ಶ್ರೀ ಗು.ಮ.ಮ||
Please watch the video
Sri sripadaraja Mutt, Moola Brindavana, Mulbagilu
- ಸುಮಾ ಸಂಜೀವ ಕೆ