Vidya Thayi Markumbi
    "ವಿದ್ಯಾ ತಾಯಿ ಮರಕುಂಬಿ" ಯವರ ಸಾಹಸ, ಸಾಧನೆ, ಇತರರಿಗೆ ಸ್ಫೂರ್ತಿ. ಅದರಲ್ಲೂ ಯುವತಿಯವರಿಗೆ ಆದರ್ಶ. ಮಹಿಳೆಯೊಬ್ಬರು ಉದ್ಯಮಕ್ಷೇತ್ರದಲ್ಲಿ ಆ ದಾಪುಗಾಲಿಟ್ಟು ದಕ್ಷಸೇವೆ ಮೂಲಕ ಅಂತರಾಷ್ಟ್ರೀಯದತ್ತ ಗಮನ ಸೆಳೆದಿದ್ದಾರೆ. ನಿಮ್ಮ ದೂರದೃಷ್ಟಿ, ದೃಢಸಂಕಲ್ಪ, ಕರ್ತವ್ಯನಿಷ್ಠೆ, ದಿಟ್ಟತನಕ್ಕೆ "ಉಕ್ಕಿನ ಮಹಿಳೆ" ಎಂದೇ ಹೆಸರು ಪಡೆದಿದ್ದಾರೆ.


ಭಾರತದಲ್ಲಿ ಪ್ರಾಮಾಣಿಕ ಸ್ವ-ಪ್ರಯತ್ನದಿಂದ ಯಾರು ಬೇಕಾದರೂ ವಿಶ್ವದಲ್ಲೇ ಶ್ರೇಷ್ಠಮಟ್ಟದ ಸಂಸ್ಥೆಗಳನ್ನು ಸ್ಥಾಪಿಸಬಹುದು. ಇದಕ್ಕೆ "ವಿದ್ಯಾತಾಯಿ ಮರಕುಂಬಿ"ಯವರೇ ಸಾಕ್ಷಿ. ಕರ್ನಾಟಕ ಹಾಗೂ ಮಹಾರಾಷ್ಟ್ರ ಭಾಗದಲ್ಲಿ ಸಕ್ಕರೆ ಉದ್ಯಮದಲ್ಲಿ ಇಳಿಯೋದು ತುಂಬಾ ಕಷ್ಟ. ಸಕ್ಕರೆ ಉದ್ದಿಮೆಯಲ್ಲಿ ದಾಪುಗಾಲನ್ನು ಹಾಕಿದ್ದಾರೆ. ರೈತರನ್ನು ಬೆಳೆಸುತ್ತಾ ಪ್ರೋತ್ಸಾಹ ನೀಡಿದ್ದಾರೆ.

 "ಡಿಸಿಷನ್ ಮೆಕಿಂಗ್ ಆ್ಯಂಡ್ ಅಕ್ಯೂರೆಟ್"ನ್ನು ಹೊಂದಿದ ವಿದ್ಯಾತಾಯಿಯವರು ಸಾವಿರಾರು ವಿದ್ಯಾವಂತ ಯವಕರಿಗೆ ನೌಕರಿಯನ್ನು ಒದಗಿಸಿದವರು.ನೇರ, ದಿಟ್ಟ, ಸರಳ, ರಾಜಗಾಂಭೀರ್ಯದ ವ್ಯಕ್ತಿತ್ವ ಪ್ರತಿಯೊಬ್ಬರಿಗೂ ಆದರ್ಶ ಹಾಗೂ ಮಾದರಿಯಾಗಿದ್ದಾರೆ. ಮಹಿಳೆಯರಿಗೆಲ್ಲಾ ಶಕ್ತಿಯಿದ್ದಂತಹ " ವಿದ್ಯಾತಾಯಿ" ಯವರ ಸಂದರ್ಶನ ಇಲ್ಲಿದೆ->

1. ಸಾಮಾನ್ಯವಾಗಿ ಜೀವನದಲ್ಲಿ ಎಲ್ಲರೂ ಡಾಕ್ಟರ್, ಇಂಜನೀಯರ್ ಅಂತಾ ಕನಸು ಕಾಣುತ್ತಾರೆ. ಬಾಲ್ಯದಲ್ಲಿ ಉದ್ಯಮಿಯಾಗಬೇಕೆಂದು ಕನಸು ಕಂಡಿದ್ರಾ? ಆ ಕನಸು ಹೇಗೆ ನನಸಾಯ್ತು?

ð            ಚಿಕ್ಕಂದಿನಿಂದಲೂ ಆಶಾವಾದಿಯಾಗಿ ಬೆಳೆದವಳು. "ಬಯಸದೆ ಬಂದ ಭಾಗ್ಯ" ಎಂಬಂತೆ ಉದ್ಯಮಕ್ಷೇತ್ರದಲ್ಲಿ ಕಾಲಿರಿಸಿದ್ದು, ಆಕಸ್ಮಿಕವಾಗಿಯೇ ಒಂದು ದೊಡ್ಡ ತಿರುವು. ಈ ಮೂಲಕವಾಗಿ ಕನಸು ನನಸಾಗಿದ್ದು.

2. ಪಾರ್ಲೆ ಏಜೆನ್ಸಿ ಮಾಡತ್ತಿದ್ದ ಒಬ್ಬ ಶ್ರೀಮಂತ ಭಾರತೀಯ, ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಉದ್ದಿಮೆಗೆ ಕಾಲಿಡಲು ಹೇಗೆ ಸಾಧ್ಯವಾಯಿತು?

ð            ನನ್ನ ಮಗ ಮಹತ್ವಾಕಾಂಕ್ಷಿಯೊಂದಿಗೆ ಟೆಕ್ನಿಕಲಿ ಸೌಂಡ್ ಹಾಗೆ ನಾವು ಕಮರ್ಶಿಯಲಿ ಸೌಂಡ್ ಇರೋದರಿಂದ ಈ ಸಕ್ಕರೆಯ ಉದ್ದಿಮೆಗೆ ಕಾಲಿಡಲು ಸಾಧ್ಯವಾಯಿತು.

3. ನೀವು ಕೃಷಿ ಆಧಾರಿತ ಉದ್ಯಮಗಳನ್ನಲ್ಲದೆ ಅಂದರೆ ನೀವು ಬೇವು ಮತ್ತು ಕಬ್ಬನ್ನಲ್ಲದೆ ಇದರ ಹೊರತಾಗಿ ಬೇರೆ ಯಾವುದಾದರೂ ಕಾರ್ಖಾನೆ ಸ್ಥಾಪಿಸಿದ್ದಿರಾ?

ð            ಹೌದು. "ಹಲಗಾ" ದಲ್ಲಿ "ಮರಕುಂಬಿ ಬಯೊ-ಅಗ್ರೋ ಪ್ರವೈಟ್ ಲಿ." ಇದರಿಂದ ನೂರು ಜನಕ್ಕೆ ಕೆಲಸ ಒದಗಿಸಿದಂತಾಯಿತು.

4. ಉದ್ಯಮದಲ್ಲಿ ಸ್ತ್ರೀಯರು ಮುಂದೆ ಬರಲು  ಕೆಲವೊಮ್ಮೆ ಹಿಂದೇಟು ಹಾಕ್ತಾ ಇರುತ್ತಾರೆ. ಅದೂ ಸಕ್ಕರೆ ಉದ್ಯಮಕ್ಷೇತ್ರದಲ್ಲಿ! ಈ ಒಂದು ಕ್ಷೇತ್ರಕ್ಕೆ ಬರಲು ಹೇಗೆ ಸಾಧ್ಯವಾಯಿತು?

ð            ಇದಕ್ಕೆ ಕಾರಣ ನನ್ನ ಮಗ. ಒಂದು ಸಲ ರಾಯಬಾಗ್ ಮಾರ್ಗವಾಗಿ ಬರುತ್ತಿದ್ದಾಗ ರೈತರು ರೊಚ್ಚಿಗೆದ್ದು ಕಬ್ಬುಗಳನ್ನು ಸುಟ್ಟು ಹಾಕಿದ್ದನ್ನು ಕಂಡು, ನನ್ನ ಮಗ ಅಮ್ಮ ಈ ಪ್ರದೇಶದಲ್ಲಿ ಯಾಕೆ ಸಕ್ಕರೆ ಕಾರ್ಖಾನೆಯನ್ನು ಸ್ಥಾಪಿಸಬಾರದು?!... ಎಂದು ಯೋಚಿಸಿದರ ಫಲವಾಗಿ ಮುನವಳ್ಳಿಯಲ್ಲಿ "ರೇಣುಕಾ ಶುಗರ್ ಫ್ಯಾಕ್ಟರಿ" ಸ್ಥಾಪಿತವಾಯಿತು. ಇಲ್ಲಿ ಸುಮಾರು 460 ಸ್ಟಾಫ್ ಮತ್ತು 460 ಕಾಂಟ್ರ್ಯಾಕ್ಟ್ಸಗಳುಂಟು.

5. ತಾವು ಮಾಡಿದ ಅಭಿವೃದ್ಧಿಗಳೇನು?

ð            ಮಹಿಳಾಮಂಡಳಗಳನ್ನು ಸ್ಥಾಪಿಸಿದೆ. "ಶ್ರೀ ರೇಣುಕಾ ಶುಗರ್ ಫೌಂಡೇಷನ್ ಟ್ರಸ್ಟ್ ಸ್ಕೂಲ್" ನ್ನು ಮುನವಳ್ಳಿಯಲ್ಲಿ ಶುಗರ್ ಫ್ಯಾಕ್ಟರಿಯ ಕಾಲೋನಿಯಲ್ಲಿ ತೆರೆಯಲಾಗಿದೆ.

ð            100 ಬೆಡ್ ಕ್ಯಾಪ್ಯಾಸಿಟಿ ಹೊಂದಿದಂತಹ ಒಂದು ಆಸ್ಪತ್ರೆಯನ್ನು ಅಥಣಿಯಲ್ಲಿ ಪ್ರತಿಯೊಬ್ಬರಿಗೂ ಅನುಕೂಲವಾಗುವಂತೆ ಮಾಡಿದ್ದಾಗಿದೆ.

ð            ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಕಬ್ಬು ಕಡಿಯಲು ಬರುವ ಜನಕ್ಕೆ ಹಾಗೂ ಹಿಂದುಳಿದ ಜನಾಂಗದವರಿಗಾಗಿ "ಶಾಕರ್ ಶಾಳಾ" ಸ್ಥಾಪಿಸಲಾಗಿದೆ. ಉಚಿತ ಶಿಕ್ಷಣ ಹಾಗೂ ಉಚಿತ ಆಹಾರದೊಂದಿಗೆ ವಿದ್ಯಾಭ್ಯಾಸ ಕೂಡಾ ಮಾಡಲು ಈ ಶಾಲೆಯಲ್ಲಿ ಕಲ್ಪಿಸಿಕೊಡಲಾಗಿದೆ.

ð            ಹಂತ ಹಂತವಾಗಿ ಅಭಿವೃದ್ಧಿಗಳಾಗುತ್ತಿವೆ. ಇನ್ನೂ ಅನೇಕ ಯೋಜನೆಗಳುಂಟು. ವಿದೇಶದಲ್ಲಿ ಕೂಡಾ "ಡಿಎಮ್‍ಸಿಸಿ ಟ್ರೇಡಿಂಗ್ ಬಿಸಿನೆಸ್"ಗಳುಂಟು. ದಕ್ಷಿಣ ಆಫ್ರಿಕಾದಲ್ಲೂ ಕೂಡಾ ಬಿಸಿನೆಸ್ ಮಾಡುವ ಯೋಜನೆಗಳಿವೆ.
                ಪ್ರತಿಯೊಬ್ಬರಿಗೂ ಸಹಾಯ ಮಾಡಬೇಕು, ಜನ ಸಮುದಾಯಗಳಿಗೆ ಹಾಗೂ ಎಲ್ಲ ಜನತೆಗೂ, ನಿರುದ್ಯೋಗ ದೊರಕಬೇಕು. ಗಳಿಸಿದ ದುಡ್ಡಿನಿಂದ ಎಲ್ಲರಿಗೂ ಉಪಯೋಗವಾಗಬೇಕೆಂಬುದೇ ನಮ್ಮ ಆಸೆ.
                                                                                                                
-ಸುಮಾ ಸಂಜೀವ ಕೆ