• ಪಿತ್ತಶಾಂತಿ:-   ಮಜ್ಜಿಗೆಗೆ ಜೀರಿಗೆ ಪುಡಿ ಮತ್ತು ಉಪ್ಪು ಸೇರಿಸಿ ಕುಡಿಯುತ್ತಿದ್ದರೆ ಪಿತ್ತಶಾಂತಿಯಾಗುತ್ತದೆ
  • ಪಿತ್ತದ ತೊಂದರೆ:-  ಒಂದು ಹಿಡಿ ಪುದೀನಾ ಎಲೆಗಳನ್ನು ನೀರಿನಲ್ಲಿ ಕುದಿಸಿಕೊಂಡುಅದಕ್ಕೆ ಹಾಲು ಮತ್ತು  ಬೆಲ್ಲದ ಪಾಕ ಹಾಕಿಕೊಂಡು ಕುಡಿಯಬೇಕು. 
  • ಪಿತ್ತ ನಿವಾರಣೆಗೆ:-  ಎರಡು ಲೋಟ ನೀರಿಗೆ ಒಂದು ಚಮಚ ಜೀರಿಗೆ ಪುಡಿ ಹಾಕಿ 5 ನಿಮಿಷ ಕುದಿಸಿ, ಮುಚ್ಚಿಟ್ಟು ಸಲ್ಪ ಸಮಯದ ಬಳಿಕ ಶೋಧಿಸಿ ಹಾಲು, ಬೆಲ್ಲ ಹಾಕಿ ಕುಡಿಯಬೇಕು
  • ಪಿತ್ತ ವಾಕರಿಕೆಗೆ:-  5  ಗ್ರಾಂ ಜೀರಿಗೆ, ಅಡಿಕೆ ಗಾತ್ರದಷ್ಟು ಬೆಲ್ಲ, ಅಷ್ಟೇ ಹುಣಸೇಹಣ್ಣು ಚೆನ್ನಾಗಿ ಜಜ್ಜಿ ಬಾಯಲ್ಲಿಟ್ಟುಕೊಂಡು, ಜಗಿದು ರಸ ನುಂಗಬೇಕು
  • ಹೊಟ್ಟೆನೋವು, ಭೇದಿ:-   ಕಾಲು ಚಮಚ ಮೆಂತ್ಯ ಬೀಜವನ್ನು ಬೆಚ್ಚಗಿನ ನೀರಿನ ಜೊತೆ ದಿನಕ್ಕೆ ಮೂರು ಬಾರಿ ನುಂಗಬೇಕು
  • ಕೈಕಾಲು ಉರಿ-ಸುಸ್ತು:- ಬಾಳೆ ಹೂವನ್ನು ಬೇಳೆಗಳೊಂದಿಗೆ ಬೇಯಿಸಿ ಸೇವಿಸುತ್ತ ಬಂದರೆ ಕೈಕಾಲು ಉರಿ ಹಾಗೂ ಸುಸ್ತು ನಿವಾರಣೆಯಾಗುತ್ತೆ.

                                                                                                                                   -ಸುಮಾ ಸಂಜೀವ ಕೆ