- ಪಿತ್ತಶಾಂತಿ:- ಮಜ್ಜಿಗೆಗೆ ಜೀರಿಗೆ ಪುಡಿ ಮತ್ತು ಉಪ್ಪು ಸೇರಿಸಿ ಕುಡಿಯುತ್ತಿದ್ದರೆ ಪಿತ್ತಶಾಂತಿಯಾಗುತ್ತದೆ.
- ಪಿತ್ತದ ತೊಂದರೆ:- ಒಂದು ಹಿಡಿ ಪುದೀನಾ ಎಲೆಗಳನ್ನು
ನೀರಿನಲ್ಲಿ ಕುದಿಸಿಕೊಂಡು, ಅದಕ್ಕೆ ಹಾಲು ಮತ್ತು ಬೆಲ್ಲದ
ಪಾಕ ಹಾಕಿಕೊಂಡು ಕುಡಿಯಬೇಕು.
- ಪಿತ್ತ ನಿವಾರಣೆಗೆ:- ಎರಡು ಲೋಟ ನೀರಿಗೆ ಒಂದು ಚಮಚ ಜೀರಿಗೆ ಪುಡಿ ಹಾಕಿ 5 ನಿಮಿಷ ಕುದಿಸಿ, ಮುಚ್ಚಿಟ್ಟು ಸಲ್ಪ ಸಮಯದ ಬಳಿಕ ಶೋಧಿಸಿ ಹಾಲು, ಬೆಲ್ಲ ಹಾಕಿ ಕುಡಿಯಬೇಕು.
- ಪಿತ್ತ ವಾಕರಿಕೆಗೆ:- 5 ಗ್ರಾಂ ಜೀರಿಗೆ, ಅಡಿಕೆ ಗಾತ್ರದಷ್ಟು ಬೆಲ್ಲ, ಅಷ್ಟೇ ಹುಣಸೇಹಣ್ಣು ಚೆನ್ನಾಗಿ ಜಜ್ಜಿ ಬಾಯಲ್ಲಿಟ್ಟುಕೊಂಡು, ಜಗಿದು ರಸ ನುಂಗಬೇಕು.
- ಹೊಟ್ಟೆನೋವು, ಭೇದಿ:- ಕಾಲು ಚಮಚ ಮೆಂತ್ಯ ಬೀಜವನ್ನು ಬೆಚ್ಚಗಿನ ನೀರಿನ ಜೊತೆ ದಿನಕ್ಕೆ ಮೂರು ಬಾರಿ ನುಂಗಬೇಕು.
- ಕೈಕಾಲು ಉರಿ-ಸುಸ್ತು:- ಬಾಳೆ ಹೂವನ್ನು ಬೇಳೆಗಳೊಂದಿಗೆ ಬೇಯಿಸಿ ಸೇವಿಸುತ್ತ ಬಂದರೆ ಕೈಕಾಲು ಉರಿ ಹಾಗೂ ಸುಸ್ತು ನಿವಾರಣೆಯಾಗುತ್ತೆ.
-ಸುಮಾ ಸಂಜೀವ ಕೆ