|| ಜಲಜೇಷ್ಠ ನಿಭಾಕಾರಂ
ಜಗದೀಶ
ಪದಾಶ್ರಯಂ
ಜಗತೀತಲವಿಖ್ಯಾತಂ ಜಗನ್ನಾಥ
ಗುರುಂಭಜೇ||
"ದಾಸ ಚತುಷ್ಟಯ"
ಎಂದೊಡನೆ ನಮ್ಮೆದುರು ನಿಲ್ಲುವವರು ನಾಲ್ವರು-ಶ್ರೀ ಪುರಂದರದಾಸರು,
ಶ್ರೀ ವಿಜಯದಾಸರು, ಶ್ರೀ ಗೋಪಾಲ ದಾಸರು(ಭಾಗಣ್ಣ ದಾಸರು) ಮತ್ತು
ಶ್ರೀ ಜಗನ್ನಾಥ ದಾಸರು. ನರಸಿಂಹದಾಸ
ಹಾಗೂ ಲಕ್ಷ್ಮೀಬಾಯಿ ದಂಪತಿಗಳಿಗೆ ರಾಯಚೂರು ಜಿಲ್ಲೆ ಮಾನವಿ
ತಾಲೂಕು ಬ್ಯಾಗವಾಟದಲ್ಲಿ ಕೀಲಕ ಸಂವತ್ಸರ ಶ್ರಾವಣ
ಶುದ್ಧ ಬಿದಿಗೆಯಂದು ಪುತ್ರರತ್ನ ಜನ್ಮವಾಗುತ್ತದೆ. "ಶ್ರೀನಿವಾಸ" ಎಂದು ನಾಮಕರಣ ಮಾಡುತ್ತಾರೆ.
ಕನ್ನಡ-ಸಂಸ್ಮೃತ ಉಭಯ
ಭಾಷಾವಿಶಾರದರಾಗಿ ಬೆಳೆದು, ಎರಡು ಭಾಷೆಗಳಲ್ಲಿ
ಆಶುಕವಿತ್ವ ಪ್ರತಿಭೆಯನ್ನು ಹೊಂದಿ ಪ್ರಸಿದ್ಧರಾದವರೇ "ಶ್ರೀ ಜಗನ್ನಾಥ
ದಾಸರು"
ಮಂತ್ರಾಲಯ ಮಠದ ಪಾಠಶಾಲೆಯಲ್ಲಿದ್ದ ಪುರುಷೋತ್ತಮಾಚಾರ್ಯರು
ಹಾಗೂ ಬಲರಾಮಾಚಾರ್ಯರು ಶ್ರೀನಿವಾಸಾಚಾರ್ಯರಿಗೆ ಶಾಸ್ತ್ರಭ್ಯಾಸ ಮಾಡಿದ ಗುರುವರ್ಯರಾಗಿದ್ದಾರೆ. ತಮ್ಮ
ಎಂಟನೇ ವಯಸ್ಸಿನಲ್ಲೆ ಗುರುಗಳಾದ ಬಲರಾಮಾಚಾರ್ಯರ ಬಗ್ಗೆ ಸ್ತೋತ್ರರೂಪವಾಗಿ ಐದು
ಶ್ಲೋಕ ರಚಿಸಿದ ದಾಸರು ಅತ್ಯಂತ
ಮೇಧಾವಿ ವಿದ್ವಾಂಸರಾಗಿದ್ದರು. ಶ್ರೀ ರಾಘವೇಂದ್ರ ಸ್ವಾಮಿಗಳ
ಮಠದ ಪರಂಪರೆಯಲ್ಲಿ ಬಂದ ಶ್ರೀ ವರದೇಂದ್ರ
ತೀರ್ಥರ ಬಗ್ಗೆ ಅವರ ಸನ್ನಿಧಿಯಲ್ಲೆ
"ವರದೇಂದ್ರ ಪಂಚರತ್ನ" ಎಂಬ ಶ್ಲೋಕಗಳನ್ನು ರಚಿಸಿ
ಅರ್ಪಿಸಿದರು. ಶ್ರೀ ಸುಮತೀಂದ್ರತೀರ್ಥರಿಂದ ರಂಗ
ಒಲಿದ ಭಾಗವತರು ಎನಿಸಿಕೊಂಡಿದ್ದ , ಶ್ರೀ
ಸತ್ಯಪೂರ್ಣ ತೀರ್ಥರಿಂದ ಪರಾವಸುನಾಮಕ ಗಂಧರ್ವರೆನಿಸಿಕೊಂಡು ಸದಾಚಾರ ಸಂಪನ್ನರಾಗಿ ಐವತ್ತು
ವರ್ಷ ಕಾಲ್ನಡಿಗೆಯಲ್ಲಿ ತಿರುಪತಿ ಯಾತ್ರೆ ಮಾಡಿದ
ನರಸಿಂಹದಾಸರಂಥವರ ಸುಪುತ್ರರಾಗಿ ಜನಿಸಿದ ಶ್ರೀನಿವಾಸರಲ್ಲಿ ಅವೇ
ಗುಣಗಳು ಮುಂದುವರೆದವು. ಜಗನ್ನಾಥದಾಸರ ತಂದೆಯವರಿಗೆ ಪುರಂದರದಾಸರಿಂದ "ನರಸಿಂಹ ವಿಠಲ" ಎಂದು
ಸ್ವಪ್ನದ ಮೂಲಕ ಸಿಗುತ್ತದೆ. ಜಗನ್ನಾಥ
ದಾಸರೆ ತಮ್ಮ ತಂದೆಯವರ ಕುರಿತು
"ನಂಬಿದೆ ನಿನ್ನ ಪಾದಾಂಬುಜ ನರಸಿಂಹದಾಸರಾಯಾ"
ಎಂಬ ಕೃತಿಯನ್ನು ರಚಿಸಿದ್ದಾರೆ. ಮಂತ್ರಾಲಯ
ಮಠದಲ್ಲಿ ತತ್ವಪ್ರಕಾಶಿಕಾ ಪಾಠ
ಆರಂಭಿಸುತ್ತಾರೆ. ವ್ಯಾಸತ್ರಯ, ವ್ಯಾಸಸುಧೆಗಳಲ್ಲಿ ಪಾರಂಗತರಾಗುತ್ತಾರೆ. ಶ್ರೀನಿವಾಸ ಆಚಾರ್ಯರು ಪಾಂಡಿತ್ಯದಲ್ಲಿ ಪ್ರಾಬಲ್ಯ ಪಡೆಯುತ್ತಾ ಸಾಗುತ್ತಾರೆ.
ವಿವಾಹದ ನಂತರ ಗುರು
ಆಜ್ಞೆಯಂತೆ ಪಾಠಪ್ರವಚನಕ್ಕೆ
ಬರುವವರ ಸಂಖೈ ಹೆಚ್ಚಾದಾಗ ಬ್ಯಾಗವಾಟ
ಬಿಟ್ಟು ಮಾನವಿಗೆ ಬಂದು ಪಾಠ
ಪ್ರವಚನ ಮಾಡುತ್ತಾ ಮಾನವಿಯಲ್ಲಿ ನೆಲೆಸುತ್ತಾರೆ. ಒಮ್ಮೆ ವಿಜಯದಾಸರು ಮಾನವಿಗೆ
ಬಂದಾಗ ಗ್ರಾಮಪ್ರದಕ್ಷಿಣೆ ಮಾಡಿ ಬ್ರಾಹ್ಮಣರಿಗೆ ತೀರ್ಥಪ್ರಸಾದ
ಏರ್ಪಡಿಸಿ ಆಮಂತ್ರಿಸಿದಾಗ ಹೊಟ್ಟೆಶೂಲೆಯಾಗುವದರಿಂದ ಬೇಗ ಊಟ ಮುಗಿಸಿದೆವು
ಎನ್ನುವ ಜಗನ್ನಾಥದಾಸರ ಮಾತನ್ನು ತಿಳಿದು ಹಾಗೆ
ಆಗಲಿ ಎಂದು ಬಿಡುತ್ತಾರೆ ವಿಜಯದಾಸರು.
ಅಂದಿನಿಂದ ಶುರುವಾದ ಹೊಟ್ಟೆಶೂಲೆ ಕಮ್ಮಿಯಾಗುವದಿಲ್ಲ.
ನಂತರ ಗುರು ರಾಘವೇಂದ್ರರ ಸೂಚನೆಯಂತೆ
ವಿಜಯದಾಸರಿಗೆ ಶರಣಾಗಿ, ಅವರ ಸಲಹೆಯಂತೆ
ಗೋಪಾಲದಾಸರ ಬಳಿ ಹೋಗಿ ಪ್ರಾರ್ಥಿಸಲು,
ಭಕ್ಕರಿ(ಜೋಳದ ರೊಟ್ಟಿ) ಮಂತ್ರಿಸಿ
ಕೊಡುತ್ತಾರೆ. ಅಂದಿನಿಂದ ಉದರಶೂಲೆ ಕಡಿಮೆಯಾಗುತ್ತದೆ. ಅಲ್ಲದೆ
ವಿಜಯದಾಸರ ಸೂಚನೆಯಂತೆ ಅವರು ಅಲ್ಪ ಆಯುಷ್ಯವನ್ನು
ಹೊಂದಿದೆ ಆಚಾರ್ಯರಿಗೆ ಆಯುರ್ದಾನವನ್ನು ಮಾಡುತ್ತಾರೆ ಈ ಎಲ್ಲ ಘಟನೆಗಳ
ನಂತರ ಗೋಪಾಲದಾಸರಿಂದ ಪ್ರೇರಿತರಾಗಿ, ಹರಿದಾಸ ದೀಕ್ಷೆ ಕೊಟ್ಟು
ಉದ್ಧರಿಸಲು ಪ್ರಾರ್ಥಿಸುತ್ತಾರೆ. ಅವರ ಸೂಚನೆಯಂತ ಪಂಢರಪುರಕ್ಕೆ ಹೋಗುತ್ತಾರೆ. ಭೀಮರಥಿ
ನದಿಯಲ್ಲಿ ಮುಳುಗಿ ಏಳುವಾಗ "ಜಗನ್ನಾಥ
ವಿಠಲ" ಎಂದು ಬರೆದ ಸಾಲಿಗ್ರಾಮಶಿಲೆ
ಸಿಗುತ್ತದೆ. ತಕ್ಷಣವೇ ಶ್ರೀನಿವಾಸ ಆಚಾರ್ಯರ
ಬಾಯಿಂದ "ಪಿಡಿ ಎನ್ನ ಕೈಯ್ಯ
ರಂಗಯ್ಯ" ಎಂಬ ಕೀರ್ತನೆ ಹೊರಹೊಮ್ಮುತ್ತದೆ.
ಅಂದಿನಿಂದ "ಜಗನ್ನಾಥ ದಾಸ" ರೆಂದು
ಪ್ರಖ್ಯಾತರಾಗುತ್ತಾರೆ. ಆ ಅಂಕಿತ ಶಿಲೆಯನ್ನು
ದೇವರ ಪೆಟ್ಟಿಗೆಯಲ್ಲಿಟ್ಟುಕೊಂಡು ದೇಗುಲದೊಳಕ್ಕೆ ಬಂದು "ಎಂದು ಕಾಂಬೆನೊ ಪಾಂಡುರಂಗ
ಮೂರುತಿಯ" ಎಂದು ಕೊಂಡಾಡುತ್ತಾರೆ.
ಶಾಸ್ತ್ರ-ಪಾಂಡಿತ್ಯ-ಕೀರ್ತನ ವೈಖರಿಗಳಿಂದ ಜಗನ್ನಾಥದಾಸರ
ಕೀರ್ತಿ ಹೆಚ್ಚುತ್ತಾ ಹೋಗುತ್ತದೆ. ಪುತ್ರನ ಅಗಲಿಕೆ, ಮಗಳ
ವೈಧವ್ಯ ಇವರ ಬಾಳಲ್ಲಿ ಬಂದೆರಗುತ್ತವೆ.
ಮನಶ್ಯಾಂತಿಗಾಗಿ "ತತ್ವಸುವ್ವಾಲಿ" ಎಂಬ ಕೃತಿಯನ್ನು ರಚಿಸುತ್ತಾರೆ. ಭಾಮಿನಿ
ಷಟ್ಪದಿಯಲ್ಲಿ 32 ಸಂಧಿಗಳಲ್ಲಿ ರಚಿತವಾಗಿರುವ "ಹರಿಕಥಾಮೃತಸಾರ" ಈ ಕೃತಿ ವಿಶಿಷ್ಟವಾಗಿದೆ.
ಮಂಗಳಾಚರಣ ಸಂಧಿಯಿಂದ ಆರಂಭಗೊಂಡು, ದೇವತಾ ತಾರತಮ್ಯ ಸಂಧಿಯೊಂದಿಗೆ
ಮುಕ್ತಾಯಗೊಳ್ಳುತ್ತದೆ. ಕರುಣಾಸಂಧಿ, ಸಕಲದುರಿತನಿವಾರಣ ಸಂಧಿ, ಗಣಪತಿಸಂಧಿ, ಶ್ವಾಸಸಂಧಿ
ಮುಂತಾದ ಅಪರೂಪದ ಅಧ್ಯಾಯಗಳನ್ನು ಹೊಂದಿದೆ.
ಜಗನ್ನಾಥದಾಸರ ರಚಿಸಿದ ಅದ್ವೀತಿಯ ಗ್ರಂಥ
"ಹರಿಕಥಾಮೃತಸಾರ"ಕ್ಕೆ ಐವರು ಅಪರೋಕ್ಷ
ಜ್ಞಾನಿಗಳಾದ ಕರ್ಜಿಗಿ ಶ್ರೀದವಿಠಲರು, ಗುರು
ಶ್ರೀಶವಿಠಲರು, ಶ್ರೀ ಮನೋಹರ ವಿಠಲರು
ಶ್ರೀ ಭೀಮೇಶ ವಿಠಲರು ಹಾಗೂ
ಶ್ರೀ ಶ್ರೀನಿವಾಸ ವಿಠಲರು ಫಲಸ್ತುತಿ ಸಂಧಿಯನ್ನುಯನ್ನು
ರಚಿಸಿದರೆ, ಈ ಕೃತಿಗೆ ಜಮಖಂಡಿ
ವಾದಿರಾಜಾಚಾರ್ಯರು "ವ್ಯಾಸದಾಸ ಸಿದ್ಧಾಂತ ಕೌಮುದಿ" ಹೆಸರಿನಿಂದ ಸಂಸ್ಕøತದಲ್ಲಿ ವ್ಯಾಖ್ಯಾನ
ಮಾಡಿದ್ದಾರೆ. ಜಗನ್ನಾಥ ದಾಸರ ಕೀರ್ತನ
ಸಾಹಿತ್ಯ ಸಾಗರ. ಏಷ್ಟೆಂದು ವರ್ಣಿಸಲು
ನಮ್ಮಿಂದ ಅಸಾಧ್ಯ.

ಶ್ಯಾಮಸುಂದರ ವಿಠಲ
ಸ್ವಾಮಿ
ಸತತ
ಪೊರೆವಾ...
-ಸುಮಾ ಸಂಜೀವ ಕೆ