ಸಮಾಜದಲ್ಲಿ ಮಹಿಳೆಯರ ಸ್ಥಾನಮಾನ
ಪ್ರಸ್ತುತ ಸಂದರ್ಭದಲ್ಲಿ ಮಹಿಳೆಯನ್ನು ನಾವು ನಮ್ಮಂತೆ ಸರಿಸಮಾನವಾಗಿ ನೋಡುವ ಗುಣ ಬೆಳೆಸಿಕೊಳ್ಳುವುದರ ಜೊತೆಗೆ ಅವಳ ಸರ್ವತೋಮುಖ ಬೆಳವಣಿಗೆಗಾಗಿ ಕಾರ್ಯತತ್ಪರರಾಗಿ ಬೇಕಾಗುತ್ತದೆ. ಇದು ಹೀಗೆ ಆಗದೇ ಇರುವುದು ಪುರುಷನ ಸ್ವಾರ್ಥವೆಂದೇ ಹೇಳಬೇಕಾಗುತ್ತದೆ. ಅದಕ್ಕಾಗಿ ದೇಶದ ಎಲ್ಲಾ ಧರ್ಮ ಮತ್ತು ಸಮಾಜದ ಮಹಿಳಾ ಲೋಕದ, ಚಿಂತನಕಾರರು ಅವರ ವಿಮೋಚನೆಗಾಗಿ ಹೋರಾಟ ಮಾಡುತ್ತಿರುವುದು ಮತ್ತು ಭವಿಷ್ಯತ್ತಿನಲ್ಲಿ ಸರಕಾರ ಬೇಕಾದ ಕಾರ್ಯಗಳ ಕುರಿತು ಹಕ್ಕೊತ್ತಾಯಗಳನ್ನು ಮಾಡುತ್ತಿರುವುದು ಕಂಡುಬರುತ್ತಿದೆ. ಇದೊಂದು ಉತ್ತಮ ಬೆಳವಣಿಗೆಯೆಂದೇ ಹೇಳಬಹುದು.
ಸನಾತನ ಕಾಲದಿಂದಲೂ ಸ್ವಾರ್ಥಿಗಳು ಮತ್ತು ಮನುವಾದಿಗಳು ಮಹಿಳೆಯನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಂಡು ಬಂದವರಾಗಿದ್ದಾರೆ. ಯಾವುದೇ ನಿ ರ್ಣಯಗಳನ್ನು ತೆಗೆದು ಕೊಳ್ಳುವಾಗ ಅವಳ ಒಂದೂ ಮಾತು ಕಿವಿಯಲ್ಲಿ ಹಾಕಿಕೊಳ್ಳದೇ, ತ ಮಸ್ಸಿಗೆ ತೋಚಿದಂತೆ ಕಾರ್ಯಭಾರವನ್ನು ಮಾಡುವುದರ ಮೂಲಕ, ತೀಮ್ಮರ್ಮಾನಗಳನ್ನು ತೆಗೆದುಕೊಂಡಿದ್ದಾರೆ. ಇಂತಹ ತೀರ್ಮಾನಗಳಿಂದ ಮಹಿಳಾ ಲೋಕಕ್ಕೆ ತುಂಬಲಾರದಗುಣ ಹಾನಿಯಾಗಿದೆ.
ಸ್ತ್ರೀಯರಲ್ಲಿ! ಪುರುಷರೇ ವಿಶೇಷವಾಗಿ ನ್ಯಾಯ ನಿರ್ಣಯ ಮಾಡುವುದು, ಚಿರ ಮತ್ತು ಚರ ಆಸ್ತಿಯ ಹಂಚಿಕೆಯ ಸಂದರ್ಭದಲ್ಲಿಯೂ ಪುರುಷ ಮಹಿಳೆಯನ್ನು ಹೀನಾಯವಾಗಿ ನಡೆಸಿಕೊಂಡಿರುವುದು ಗ್ರಾಮೀಣ
ಜನವೀನದ ಚರಿತ್ರೆಯಿಂದ ತಿಳಿದುಬರುತ್ತದೆ ಈ ಆಸ್ತಿಯ ಹಂಚಿಕೆಯ ಸಂಬಂಧದಲ್ಲಿ ಬುದ್ಧ ಒಂದು ಹೆಜ್ಜೆ ಮುಂದೆ ಹೋಗಿ ತನ್ನ ಮಕ್ಕಳಿಗಲ್ಲದೆ ತನ್ನಿಂದ ಜನಿಸಿದ ದಾಸಿಯ ಮಕ್ಕಳಿಗೂ ಆಸ್ತಿಯಲ್ಲಿ ಸಮಪಾಲು ಕೊಡಬೇಕಾಗುತ್ತದೆಂದು ಹೇಳಿರುವುದು ಗಮನಿಸಬಹುದು.
ಹಿಂದೂ ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳೆ ಯಾವುದೇ ಜಾತಿ ವಿಜಾತಿಗಳಿಗೆ ಸೇರಿದವಳಾಗಿರಲಿ, ಅವಳ ಸ್ಥಿತಿಯನ್ನು ನೋಡಿದರೆ ಅವಳು ಪುರುಷನ ಕಪಿಮುಷ್ಠಿಯಿಂದ ಬಿಡಿಸಿಕೊಳ್ಳಲು ಸಾಧ್ಯವೇ ಇಲ್ಲವೆನಿಸುತ್ತದೆ.
ಇದು ಮುಂದುವರಿದ ಮಹಿಳೆಯರ ಸ್ಥಿತಿಗತಿಗಳಾದರೆ, ಮಾಧ್ಯಮ ಮತ್ತು ಪಂಚಮರ ಸ್ಥಿತಿಗತಿಗಳು ಭಯಾನಕ ಮತ್ತು ರೋಚಕವಾಗಿವೆ. ಮೇಲವರು ತಮ್ಮ ಹೆಂಗಸರನ್ನು ಎಷ್ಟು ಕೀಳಾಗಿ ಕಾಣುತ್ತಾರೆಯೋ ಅದಕ್ಕೆ ಎರಡು, ಹತ್ತುಪಟ್ಟು ಅಸ್ಪ್ರಶ್ಯ ಹೆಂಗಸರನ್ನು ಹೀನವಾದ ದೃಷ್ಟಿಯಿಂದ ಮೇಲವರು ನೋಡುತ್ತಾರೆ. ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ದೈಹಿಕವಾಗಿಯೂ ಕೆಳವರ್ಗದ ಮಹಿಳೆ ಶೋಷಣೆಗೆ ಒಳಗಾಗುತ್ತಾಳೆ. ಈ ಬಂಧನದಿಂದ ಮುಕ್ತಿಯನ್ನು ಪಡೆಯಬೇಕಾದರೆ ಮಹಿಳೆಯು ಶಿಕ್ಷಣವನ್ನು ಪಡೆಯುವುದರ ಮೂಲಕ ತನ್ನ ಮೇಲಾಗಿರುವ ವಿವಿಧ ಹಂತದಲ್ಲಿಯ ಶೋಷಣಾ ಪದ್ಧತಿಯ ಹಿಂದಿರುವ ಕಾರ್ಯಕಾರಣಗಳನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ.
ಸ್ವಾತಂತ್ರ್ಯಾ ನಂತರದ ಸಂದರ್ಭದಲ್ಲಿಯೂ ಮೇಲ್ವರ್ಗದ ಸ್ತ್ರೀಯರು ಅತ್ಯಂತ ಕೆಳವರ್ಗದ (ಶೂದ್ರರು-ಅಸ್ಪ್ರಶ್ಯರು) ಸ್ತ್ರೀಯರಿಂದ ಮುಟ್ಟಿಸಿಕೊಳ್ಳುವುದಿಲ್ಲವೆಂಬ ನಗ್ನಸತ್ಯವು ಸಮಾಜದಲ್ಲಿ ಕಂಡುಬರುತ್ತದೆ. ಹೀಗಾಗಿ ದಲಿತ ಸ್ತ್ರೀ ಎಷ್ಟೊಂದು ಹೀನಾಯ ಸ್ಥಿತಿಯಲ್ಲಿದ್ದಾಳೆಂಬುದರ ಅರಿವಾಗುತ್ತದೆ. ಆದರೆ ಮೇಲವರ ಭೋಗದ ವಸ್ತುವಾದ ಅವರವರ ಸ್ತ್ರೀಯರು ಕಂಡುಬಂದರೆ, ಕಾಮದ ತೀಟೆಯನ್ನು ತೀರಿಸಿಕೊಳ್ಳುವುದಕ್ಕಾಗಿ ಮೇಲವರು ಅಸ್ಪ್ರಶ್ಯ ಆದಿವಾಸಿ ಹೆಂಗಸರನ್ನು ಬಳಿಸಿರುವುದು ನೋಡಿದರೆ, ನವ ಪುರುಷ, ಸ್ತ್ರೀಯನ್ನು ಹೇಗೆ ಕಂಡನೆಂಬುದರ ಅರ್ಥವಾಗುತ್ತದೆ. ಜೊತೆಗೆ ಸಮಾಜದಲ್ಲಿಯ ಪುರುಷನ ಹೀನ ಕ್ರತ್ಯ ಕಂಡು ರೋಷ ಉಕ್ಕುತ್ತದೆ.
ಪೂಜಾ ವಿಧಿ-ವಿಧಾನ ಮಡಿಮೈಲಿಗೆಗಳೇ ಪ್ರಧಾನವಾದ ಈ ಸಮಾಜದಲ್ಲಿ ಪುರುಷ ಸ್ತ್ರೀಯರನ್ನು ಶೋಷಣೆ ಮಾಡುತ್ತಲೇ ಇದ್ದಾನೆಯೇ ವಿನ: ಅವಳಿಗೆ ಯಾವುದೇ ಮೀಸಲಾತಿಯನ್ನು ಕೊಟ್ಟು ಅವಳ ಭವಿಷ್ಯವನ್ನು ರೂಪಿಸುವ ನಿರ್ಮಾತ್ರಗಳಿಲ್ಲದಿರುವುದು ಖೇದದ ಸಂಗತಿಯಾಗಿದೆ.
ರಾಜಕೀಯ ಕ್ಷೇತ್ರದಲ್ಲಿ ಮಹಿಳಾ ಮೀಸಲಾತಿ
ಶಿಷ್ಟ ಮಹಾಕಾವ್ಯ, ಪುರಾಣ, ರಾಜಕೀಯ, ಇತಿಹಾಸದ ಸಂದರ್ಭದಲ್ಲಿ ಮಹಿಳೆಯು ತಕ್ಕಮಟ್ಟಿಗೆ ರಾಜಕೀಯ ಸೂತ್ರದ ಸಮೀಪ ಬಂದಳೆಂಬುದನ್ನು ಕೆಲವು ಅರಸು ಮನೆತನಗಳಲ್ಲಿಯ ದಾಖಲೆಗಳಿಂದ ತಿಳಿದುಬರುತ್ತದೆ. ರಾಣಿ ಚೆನ್ನಮ್ಮ, ಕೆಳದಿ ಚೆನ್ನಮ್ಮ, ಝಾನ್ಸಿರಾಣಿ ಲಕ್ಷ್ಮೀಬಾಯಿ ಮುಂತಾದವರನ್ನು ಉದಾಹರಿಸಬಹುದು. ಅವರೆಲ್ಲ ತಾವೇ ಸ್ವತ: ಜನೋಪಯೋಗಿ ಕೆಲಸಗಳಲ್ಲಿ ತೊಡಗಿ ಮುಂದಿನ ಪೀಳಿಗೆಗೆ ಮಾದರಿಯಾಗಿದ್ದಾರೆ. ಆದರೆ ಈ ಮೇಲಿನ ಉದಾಹರಣೆಗಳು ಅಪತ್ಕಾಲದಲ್ಲಿ ಮಹಿಳೆ ರಾಜ್ಯದ ಅಧಿಕಾರವನ್ನು ಹಿಡಿದು ರಾಜ ಸೂತ್ರವನ್ನು ನಡೆಸಿದವಳೆಂಬುದನ್ನು ಮರೆಯುವಂತಿಲ್ಲ.
ಇರುವುದು ಸತ್ಯ ಇದು ಈ ದೇಶದ ಸ್ವಾತಂತ್ರ್ಯ ಪೂರ್ವದ ರಾಜಕೀಯ ಇತಿಹಾಸವಾದರೆ, ತದನಂತರದ ಸಂದರ್ಭದಲ್ಲಿ ಅನ್ಯಧರ್ಮೀಯರು ಈ ದೇಶವನ್ನು ಆಳುವುದಕ್ಕೆ ಪ್ರಾರಂಭಿಸಿದ ಮೇಲೆ ಮಹಿಳೆ ರಾಜಕೀಯ ಶಕ್ತಿಯಿಂದ ದೂರ ಉಳಿದಳೆಂದು ಹೇಳಬಹುದು. ಇಂತಹ ಸಂದರ್ಭದಲ್ಲಿ ಪುರುಷನೇ ಗುಲಾಮಾಗಿದ್ದಾಗ ಮಹಿಳೆಗೆ ಯಾರು ತಾನೇ ಸ್ವಾತಂತ್ರ್ಯ ಕೊಡಬೇಕು? ಈ ಕುರಿತಂತೆ ಪುರುಷ ಆಲೋಚನೆಯನ್ನು ಮಾಡಲಿಲ್ಲ. ಅಧಿಕಾರ ಕಳೆದುಕೊಂಡ ಇನ್ನೊಬ್ಬರಿಗೆ ಅಧಿಕಾರ ಕೊಡುವುದಕ್ಕಾಗಿ ಹೋರಾಟ ಮಾಡುವ ಧೀರರು ನಮ್ಮಲ್ಲಿ ಕಾಣಸಿಗದೇ.
ಸ್ವಾತಂತ್ರ್ಯ ಚಳವಳಿ ಮತ್ತು ಮಹಿಳೆ
ಶತಮಾನಗಳ ಇತಿಹಾಸ ಮತ್ತು ಮಾನವ ಜನಾಂಗದ ಚರಿತ್ರೆಯನ್ನು ಅವಲೋಕಿಸುವಾಗ, ಮಹಿಳೆಯ ಸ್ಥಾನ-ಮಾನಗಳು ಬಹಳ ಹಿನ್ನಡೆಯನ್ನು ಪಡೆದಿವೆ. ಕಾರ್ಮಿಕ ಮಹಿಳೆಯೇ ಮೇಲ್ವರ್ಗದ ಮಹಿಳೆಗಿಂತಲೂ ಎಷ್ಟೋ ವಾಸಿ ಎಂದು ಹೇಳಬಹುದು. ಯಾವುದೇ ಅಧಿಕಾರ ಅಂತಸ್ತುಗಳನ್ನು ಲೆಕ್ಕಿಸದೇ ಗಂಡನ ಸರಿಸಮಾನವಾಗಿ ಬದುಕುತ್ತಾ ಬಂದವಳೆಂದರೆ ಶೂದ್ರ, ಅತಿ ಶೂದ್ರ ಹೆಣ್ಣು ಎಂಬುವುದು ಯಾರೂ ಮರೆಯುವಂತಿಲ್ಲ. ಆದರೆ ಅವಳ ಕುರಿತಾದ ದಾಖಲೆಗಳು ಎಲ್ಲಿಯೂ ಆಗಲಿಲ್ಲವೆಂಬುದು ಒಂದು ರೀತಿಯ ದುರಂತ.
ಹಲವು ಶತಮಾನಗಳ ಕಾಲ ಈ ದೇಶದಲ್ಲಿಯ ಮುಂದುವರಿದವರು ತಮ್ಮ ಸ್ವಾತಂತ್ರ್ಯವನ್ನು ಕಳಚಿಕೊಂಡ ದಾಸರಾದಾಗ ಅವರಿಗೆ ದಾಸತ್ವವೆಂಬುದರ ಮನವರಿಕೆಯಾಯಿತು. ಪುನ: ಸ್ವಾತಂತ್ರ್ಯವನ್ನು ಗಳಿಸಿಕೊಳ್ಳುವುದಕ್ಕಾಗಿ ದೇಶದಲ್ಲಿ ಜನಜಾಗ್ರತಿಯನ್ನುಂಟುಮಾಡಲು ತೊಡಗಿದರು. ಅದರ ಪ್ರತಿಫಲವಾಗಿ ನೂರಾರು ಜನ ಧೀರ ಮಹಿಳೆಯರು ಈ ಚಳವಳಿಯಲ್ಲಿ ಭಾಗವಹಿಸಿದರು.
ಈ ಹಿನ್ನೆಲೆಯಲ್ಲಿ ಅನೇಕ ಮುಂದುವರಿದ ಹಿಂದುಳಿದ ವರ್ಗದ ಮಹಿಳೆಯರು ಸ್ವಾತಂತ್ರ್ಯ ಚಳವಳಿಯಲಿ ಭಾಗವಹಿಸಿ ತಮ್ಮ ಬೆಂಬಲವನ್ನು ಸೂಚಿಸಿದರು. ಇಂತಹ ವೇಳೆಯಲ್ಲಿ ಅವರಲ್ಲಿ ಯಾವುದೇ ಕೀಳರಿಮೆ ಎನ್ನುವುದು ಇರಲಿಲ್ಲ. ಹೀಗೆ ಎಲ್ಲರ ತ್ಯಾಗ ಮತ್ತು ಬಲಿಧಾನಗಳ ಮೂಲಕ ಭಾರತ ದೇಶ ದಾಸ್ಯದಿಂದ ಮುಕ್ತವಾಯಿತು. ಕ್ರಮೇಣ ಸರಕಾರ ರಚನೆಯ ಸಂದರ್ಭದಲ್ಲಿ ಆಯಾ ಜಾತಿವಾರು ಪುರುಷರು ನಾಯಕರಾಗಬೇಕೆಂಬ ಅತಿ ಆಸೆಯಿಂದ ತಮ್ಮ ತಮ್ಮ ಮನೆಯ ಜಾತಿ, ಸಮಾಜದ ಮಹಿಳೆಯರನ್ನು ಬದಿಗೆ ಸರಿಸಿ, ರಾಜಕೀಯ ಅಧಿಕಾರಕ್ಕಾಗಿ ಪೈಪೆÇೀಟಿ ನಡೆಸಿದರು. ಅದರ ಪ್ರತಿಫಲವಾಗಿ ರಾಜಕೀಯ ಕ್ಷೇತ್ರದಲ್ಲಿ ಭಾರತೀಯ ನಾರಿ ಗಂಡನಷ್ಟೇ ಸಮಾನವಕಾಶಗಳನ್ನು ಪಡೇಯದೇ ವಂಚಿತಳಾದಳು. ಇದು ಒಂದು ರೀತಿಯಿಂದ ಮಹಿಳಾ ಮೀಸಲಾತಿಗೆ ಹೊಡೆತ ಬಿತ್ತೆಂದು ಹೇಳಬಹುದು. ಇಂತಹ ಸ್ಥಿತಿಯೊಳಗೆ ಬೆರಳೆನಿಕೆಯಷ್ಟು ಜನ ಅಧಿಕಾರದ ಸೂತ್ರವನ್ನು ಹಿಡಿದಿರುವುದು ಸಹಾನುಭೂತಿಯಿಂದಾಗಿ ಎಂಬುದು ತಿಳಿದುಬರುವ ಸಂಗತಿಯಾಗಿದೆ.
ಭಾರತೀಯ ಸಾಮಾಜಿಕ ನೆಲೆಯಲ್ಲಿ ಮಹಿಳೆಯನ್ನು ಕುರಿತು ಅಧ್ಯಯನ ಮಾಡುವಾಗ ಈ ದೇಶದ ಪುರುಷನ ದೃಷ್ಟಿಯಲ್ಲಿ ಅವಳು ಅಸ್ಪ್ರಶ್ಯಳೇ ವಿನ:ತನ್ನಂತೆ ಸಮಾನವಾದವಳೆಂಬ ಭಾವನೆ ಗಂಡಸರಲ್ಲಿಲ್ಲವೆಂಬುದು ಸತ್ಯ. ಈ ಸೂಕ್ಷ್ಮತೆಯನ್ನು ಗುರುತಿಸಿದ ಡಾ.ಬಿ.ಆರ್.ಅಂಬೇಡ್ಕರವರು ಮಹಿಳಾ ಮೀಸಲಾತಿಯ ಪರವಾಗಿ, ಅವಳ ಉಜ್ವಲ ಭವಿಷ್ಯವನ್ನು ಕುರಿತು ಸಾಂವಿಧಾನಿಕವಾಗಿ ಚಿಂತಿಸಿದರು. ಅವರು ಚುನಾಯಿತ ಸದಸ್ಯರಾಗಿ ಪಾರ್ಲಿಮೆಂಟಿನಲ್ಲಿ ಹಿಂದು ಕೋಡ್ ಬಿಲ್ ನ್ನು ಮಂಡಿಸುವುದರ ಮೂಲಕ, ಸ್ವತಂತ್ರ ಭಾರತದ ನಾರಿಯ ಬಂಧನವನ್ನು ಮುಕ್ತ ಮಾಡಲು ಪ್ರಯತ್ನಿಸಿದರು. ಅವರು ಮಂಡಿಸಿದ ಪರಿಚ್ಛೇದದ ಹಿಂದಿರುವ ಮಹಿಳಾ ಪರ ಮನಸ್ಸಿನ ಭಾವನಗಳನ್ನು ಮುಂದುವರಿದ ಮನಸ್ಸುಗಳ ಅರ್ಥವೇ ಮಾಡಿ ಕೊಳ್ಳಲಿಲ್ಲ. ಮಾಡಿಕೊಂಡರೂ ಕೆಲವರೂ ಅವರಿಗೆ ಪಾರ್ಲಿಮೆಂಟಿನಲ್ಲಿ ಬೆಂಬಲವನ್ನು ಸೂಚಿಸಿದೇ ಇರುವುದು ಒಂದು ದುರಂತ.
ಮಹಿಳಾ ಪರ ವಿಚಾರಗಳನ್ನು ಮಂಡಿಸುವುದಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಬಲವಾರ ಆಧಾರಗಳಿದ್ದವು. ಮಹಿಳಾ ಮೀಸಲಾತಿಯ ಕುರಿತು ಆಕೆಯ ಆಸ್ತಿ ಹಕ್ಕಿನ ಕುರಿತು ಗೌತಮ ಬುದ್ಧ, ಜ್ಯೋತಿಬಾಫುಲೆ, ಮುಂತಾದ ಮಹಾತ್ಮರು ಸಂದರ್ಭಾನುಸಾರವಾಗಿ ಮಾತಾಡಿದ್ದರು. ಜೊತೆಗೆ ಬೇರೆ ಬೇರೆ ದೇಶಗಳಲ್ಲಿಯ ಸಮಾಜ ಮುಖಿ ಮಹಿಳಾ ಮುಖಿ ಚಿಂತನೆಗಳನ್ನು ಅಧ್ಯಯನ ಮಾಡಿದ ಡಾ.ಬಾಬಾಸಾಹೇಬರು ಭಾರತದ ಮಹಿಳೆಯ ಹಕ್ಕು ಬಾಧ್ಯತೆಗಳನ್ನು ಕುರಿತು ಮಹತ್ವಪೂರ್ಣ ವಿಚಾರವನ್ನು ವ್ಯಕ್ತಪಡಿಸಿದರು. ಆದರೆ ಆ ಮಸೂದೆಯು ಪಾರ್ಲಿಮೆಂಟಿನಲ್ಲಿ ಸರ್ವರ ಒಪ್ಪಿಗೆ ಇಲ್ಲದ ಕಾರಣ ಅವರು ತಮ್ಮ ಮಂತ್ರಿ ಪದವಿಗೆ ರಾಜೀನಾಮೆಯನ್ನು ನೀಡಿ, ಹೊರಬಂದರೆಂಬುದರ ಹಿಂದೆ ಡಾ.ಬಾಬಾಸಾಹೇಬರು ಈ ದೇಶದ ಮಹಿಳೆಯರ ಕುರಿತು ಎಷ್ಟು ಆದರ-ಗೌರವಗಳನ್ನು ಇಟ್ಟುಕೊಡಿದ್ದರೆಂಬುದು ಮತ್ತು ಅವ ರ ಭವಿಷ್ಯವನ್ನು ಕುರಿತು ಅವರು ಸದಾ ಚಿಂತಿಸುತ್ತಿದ್ದರೆಂಬುದರ ಮನವರಿಕೆಯಾಗುತ್ತದೆ. ಅವರು ಸಂವಿಧಾನದಲ್ಲಿ ಬರೆದಿಟ್ಟು ಮಹಿಳಾ ಮರ ಚಿಂತೆಗಳು ಪ್ರಸ್ತುತ ಸಂದರ್ಭದಲ್ಲಿ ಕ್ರಮೇಣ ಜಾರಿಗೆ ಬರುತ್ತಿರುವುದು ಭಾರತೀಯರು ಸಂವಿಧಾನಕ್ಕೆ ಕೊಟ್ಟಿ ಗೌರವವೆಂದೇ ತಿಳಿದುಕೊಳ್ಳಬೇಕಾಗುತ್ತದೆ.
ಮಹಿಳೆಯನ್ನು ಮೀಸಲಾತಿಯ ವ್ಯಾಪ್ತಿಗೆ ತರುವಾಗ ನಾವು ಅವಳು ಸಾಕ್ಷರಳಾಗಿರುವವಳನ್ನು ಆಯ್ಕೇ ಮಾಡುವುದು ಜರೂರಾಗಿದೆ. ಯಾವ ಜನಸಮುದಾಯದಲ್ಲಿ ಮಹಿಳೆ ಸಾಕ್ಷರಳಾಗಿಲ್ಲವೋ ಅಂತಹ ಪರಿಸ್ಥಿತಿಯಲ್ಲಿ ಸಾಕ್ಷರತೆ ಮತ್ತು ಮೀಸಲಾತಿ ಪ್ರಕ್ರಿಯೇ ಎರಡನ್ನು ಸಮಾನವಾಗಿ ನೋಡಿಕೊಳ್ಳಬೇಕಾಗುತ್ತದೆ.ಆದರೆ ಇಂತಹ ಸಂದರ್ಭದಲ್ಲೆಲ್ಲ ಆಯಾ ಕ್ಷೇತ್ರದ ಅಭಿವ್ರಿದ್ಧಿಯಲ್ಲಿ ಒಂದಿಷ್ಟು ಹಿನ್ನಡೆಯಾದರೂ ಆಗಬಹುದು. ಆಗ ಉಳಿದ ಪುರುಷ ಸಾಕ್ಷಾರರು ಮಹಿಳೆಗೆ ಸಹಾಯ ಸಹಕಾರ ಕೊಡುವುದರ ಮೂಲಕ ಈ ಕೊರತೆಯನ್ನು ತುಂಬಿಕೊಳ್ಳಬಹುದಾಗಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಏನೆಲ್ಲ ಪ್ರಗತಿಯನ್ನು, ಯೋಜನೆಗಳನ್ನು ಜಾರಿಗೆ ತರುವಾಗ ನಾವು ಸಂವಿಧಾನದಲ್ಲಿ ಆ ಕುರಿತು ಏನನ್ನು ಹೇಳಲಾಗಿದೆ? ಎಂಬುದನ್ನು ಅಧ್ಯಯನ ಮಾಡುವುದು ಆದ್ಯ ಕರ್ತವ್ಯಗಳಲ್ಲೊಂದಾಗಿದೆ. ಈ ಕುರಿತಂತೆ ಸಂವಿಧಾನದ ಅನಿಚ್ಛೇದ 73, 74ರ ತಿದ್ದುಪಡಿಯು ಆಯಾ ಗ್ರಾಮ ಪಂಚಾಯತಿ ಮತ್ತು ನಗರ ಸಭೆಯ ರಾಜಕೀಯ ಅಧಿಕಾರದ ಸೂತ್ರವನ್ನು ಹಿಡಿಯುವಾಗ ಮಹಿಳೆಗೆ ಶೇ.33 ಮೀಸಲಾತಿಯನ್ನು ನೀಡಬಹುದೆಂದು
ನಿರ್ಣಯಿಸಲಾಯಿತು. ಈ ಹಿನ್ನೆಲೆಯಲ್ಲಿ ಇದು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಅನ್ವಯ ಮಾಡಲಾಯಿತು ಮತ್ತು ಇದೊಂದು ರಚನಾತ್ಮಕ ಕ್ರಾಂತಿಯು ಎಂದು ಹೇಳಬಹುದು. ಮುಂದೆ 1993 ರಲ್ಲಿ ಕರ್ನಾಟಕ ಸರಕಾರ ಪಂಚಾಯತ್ ರಾಜ್ ಅಧಿನಿಯಮವನ್ನು ಜಾರಿಗೊಳಿಸಿ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಮಹಿಳೆಯರಿಗೆ ಶೇ.25 ರಾಜಕೀಯ ಮೀಸಲಾತಿಯನ್ನು ಘೋಷಿಸಿತು. ಸ್ಥಳೀಯ ಆಡಳಿತದ ಮಹಿಳಾ ಮೀಸಲಾತಿ ಪ್ರಕ್ರಿಯೇಯು ಮಹಿಳಾ ಮೀಸಲಾತಿ ಕಲ್ಪಿಸುವ ಬಗ್ಗೆ ಯೋಚಿಸಲಾಯಿತು.
ಸಂವಿಧಾನಾತ್ಮಕವಾಗಿ ಮಹಿಳಾ ಪರ, ರಾಜಕೀಯ ಮಹಿಳಾ ಮೀಸಲಾತಿಯ ಸಂವೇದನೆಗಳ ಅಧಿಸೂಚನೆಗಳು ಪ್ರಕಟಗೊಳ್ಳುತ್ತಿದ್ದಂತೆ, ದೇಶದ ರಾಜ್ಯ ಹಾಗೂ ರಾಷ್ಟ್ರದ ರಾಜಕೀಯ ಪಕ್ಷಗಳಲ್ಲಿ ಮಹಿಳೆ ಕುರಿತು ಚಿಂತನೆ ನಡೆಸಿದವು. ಹೇಗಾದರೂ ಮಾಡಿ ಈ ದೇಶದ ಬಹುಪಾಲು ಮಹಿಳೆಯರನ್ನು ತಮ್ಮ ತಮ್ಮ ಪಕ್ಷದ ಕಕ್ಷೆಯೊಳಗಡೆ ತರಬೇಕೆಂದೂ, ಮತ್ತು ಅವಳಿಗೂ ಒಂದಿಷ್ಟು ಸ್ಥಾನಗಳನ್ನು ಪಕ್ಷದಲ್ಲಿ ಕೊಡಬೇಕೆಂಬ ನಿಲುವಿಗೆ ಬಂದರು. ಇದರ ಪ್ರತಿಫಲವಾಗಿ ದೇಶದಲ್ಲಿ ಸಾವಿರಾರು ಜನ ಮಹಿಳೆಯರು ರಾಜಕೀಯ ಕ್ಷೇತ್ರದ ಕಡೆಗೆ ಹೆಜ್ಜೆ ಹಾಕಲು ಪ್ರಾರಂಭಿಸಿದರು.
1986 ರಲ್ಲಿ ಕೇಂದ್ರದಲ್ಲಿ ಹೊಸ ಸರಕಾರ ಅಧಿಕಾರಕ್ಕೆ ಬಂದಾಗ, ಸಂವಿಧಾನದ 81ನೇ ತಿದ್ದುಪಡಿ ಮಸೂದೆಯ ಶಾಸನಸಭೆ ಮತ್ತು ಲೋಕಸಭೆಗೆ ಶೇ.25 ಮಹಿಳಾ ಮೀಸಲಾತಿ ಕೊಡಬೇಕೆಂಬ ವಿಷಯವನ್ನು ರೂಪಿಸಲಾಯಿತು. ತದನಂತರದ ಸಂದರ್ಭದಲ್ಲಿ ಶರದ್ ಯಾದವ ಮತ್ತು ಲಾಲೂ ಪ್ರಸಾದ ಅವರು ಮಂಡಿಸಿದ ಶೇ.33 ಮಹಿಳಾ ಮೀಸಲಾತಿಯಲ್ಲಿಯೂ ಹಿಂದುಳಿದ ಮಹಿಳೆಯರಿಗೆ ಮೀಸಲಾತಿಯನ್ನು ಕಡ್ದಾಯಗೊಳಿಸಬೇಕೆಂಬ ವಿಚಾರವನ್ನು ಬಲವಾಗಿ ವ್ಯಕ್ತಪಡಿಸಿರುವುದರಿಂದ ಇದಕ್ಕೆ
ಒಂದಿಷ್ಟು ಹಿನ್ನಡೆವುಂಟಾಯಿತು. ತದನಂತರ ಒಂದೆರಡು ಸಮಿತಿಗಳು ರಚನೆ ಮತ್ತು ಅವುಗಳ ವರದಿಯ ಹಿನ್ನಲೆಯಲ್ಲಿ ಜಾತಿ-ಉಪಜಾತಿಗಳ ಮಹಿಳೆಯರಿಗೂ ಮೀಸಲಾತಿಯ ವ್ಯಾಪ್ತಿಯ ಒಳಗಡೆ ತರಬೇಕೆಂಬ ಬೇಡಿಕೆಗಳು ಬಂದ ಕಾರಣ ಈ ಮೀಸಲಾತಿ ಪ್ರಕ್ರಿ0iÉು ವಿಳಂಬವಾಗುತ್ತ ಸಾಗುತ್ತದೆ.
ರಾಜಕೀಯವಾಗಿ ನಾವು ಮಹಿಳಾ ಮೀಸಲಾತಿಯನ್ನು ಜಾರಿಗೆ ತರುವಾಗ ಈ ಮಸೂದೆ ಗ್ರಾಮೀಣ ಜಿಲ್ಲಾ ಪಂಚಾಯತಿಗಳಿಗೆ ಅನ್ವಯಿಸಿದಂತೆ ಎಂ.ಎಲ್.ಎ ಮತ್ತು ಎಂ.ಪಿ ಕ್ಷೇತ್ರಗಳ ಸಂದರ್ಭದಲ್ಲಿಯೋ ಜಾರಿಗೆ ತರುವುದು ಸೂಕ್ತವಾಗಿದೆ. ಏಕೆಂದರೆ ಪ್ರತಿಯೊಂದು ಜನಾಂಗ ಧರ್ಮ, ಜಾತಿ, ಉಪ ಜಾತಿ, ಅಲೆಮಾರಿ, ಬುಡಕಟ್ಟು ಮಹಿಳೆಯರಿಗೂ ಲೆಕ್ಕಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಏಕೆಂದರೆ ಪ್ರಗತಿ ಹೋದಿವರಷ್ಟೇ ಸರಕಾರದ ಅಧಿಕಾರವನ್ನು ಅನುಭವಿಸುವುದು ಪ್ರಾಜಾಪ್ರಭುತ್ವ ವ್ಯವಸ್ಥೆಯ ಮೂಲ ಉದ್ದೇಶವಲ್ಲ. ಪ್ರತಿಯೊಬ್ಬರಿಗೂ, ಸಮಾಜದ ಕಟ್ಟ ಕಡೆಯ ಮನುಷ್ಯನಿಗೂ ಅದರ ಲಾಭವು ಸಿಗಬೇಕಾಗುತ್ತದೆ. ಅಂದಾಗ ಮಾತ್ರ ಸಂವಿಧಾನದ ಕನಸು ನನಸಾಗುತ್ತದೆ. ಹೀಗಾಗಿ ಮಹಿಳಾ ಮೀಸಲಾತಿಯ ಸಂದರ್ಭದಲ್ಲಿ ದೇಶದ ಪ್ರತಿಯೊಂದು ಕೋಮಿನ ಮಳೆಯರು ತಮ್ಮ ತಮ್ಮ ಜಾತಿ ಧರ್ಮಗಳನ್ನು ಬದಿಗೆ ಸರಿಸಿ, ರಚನಾತ್ಮಕ ಹೋರಾಟವನ್ನು ಮಾಡುವುದು ತುರ್ತಾಗಿದೆ ಎಂಬುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಅಂದಾಗ ಮಾತ್ರ ಮಹಿಳೆಯರಿಗೆ ರಾಜಕೀಯ ಜಯ ಸಿಗುವುದಕ್ಕೆ ಸಾಧ್ಯ, ಇಲ್ಲದಿದ್ದರೆ ಮನೆಯ ಯುಜಮಾನರು ಹೇಳಿದಂತೆ ಮಹಿಳೆ ಕೇಳುತ್ತಾ ಸಾಗಿದರೆ ಈ ಮಸೂದೆ ಕಾಗದದಲ್ಲಿ ಮಾತ್ರ ರಾರಾಜಿಸುತ್ತದೆ.
ಭಾರತದ ಸಂವಿಧಾನ ರಚನೆಯಾಗುವಾಗ ಅನುಚ್ಛೇದ 5(2) ರಲ್ಲಿ ಮಹಿಳಾ ಪರ ಉಪವ್ರಂದಗಳನ್ನು ಕಲ್ಪಿಸಲಾಗಿದೆ.ಈ ನಿಟ್ಟಿನಲ್ಲಿ ಲೋಕಸಭೇ ಮತ್ತು ವಿಧಾನ ಸಭೆಗಳ ಮಹಿಳಾ ಮೀಸಲಾತಿ ವಿಧೇಯಕ ಅಸಂವಿಧಾನಿಕವಲ್ಲ. ಈ ಮಹಿಳಾ ಮೀಸಲಾತಿ ವಿಧೇಯಕ ನಾಲ್ಕು ಅಂಶಗಳನ್ನು ಒಳಗೊಂಡಿದೆ.
1. ಸಂವಿಧಾನಕ್ಕೆ ತಿದ್ದುಪಡಿ ಮಾಡುವ ಮೂಲಕ ಲೋಕ ಸಭೆ, ವಿಧಾನ ಸಭೆಗಳ ಒಟ್ಟು ಸ್ಥಾನಗಳ ಮೂರನೆಯ ಒಂದು ಸ್ಥಾನವನ್ನು ಮಹಿಳೆಯರಿಗೆ ಮೀಸಲಿಡುವುದು.
2. ಈ ಮೀಸಲಾತಿಯು ಅನಿರ್ದಿಷ್ಟಾವಧಿ ತನಕ ವಿಸ್ತರಿಸುತ್ತದೆ.
3. ಮಹಿಳಾ ಮೀಸಲು ಕ್ಷೇತ್ರಗಳನ್ನು ಚೀಟಿ ಎತ್ತುವ ಮೂಲಕ ನಿರ್ಧರಿಸಲಾಗುತ್ತದೆ. ಪ್ರತಿ ಚುನಾವಣೆಯಲ್ಲಿ ಮೀಸಲಾತಿ ಕ್ಷೇತ್ರವನ್ನು ಬದಲಾಯಿಸಲಾಗುತ್ತದೆ.
4. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಈಗಾಗಲೇ ಸಂವಿಧಾನದಲ್ಲಿ ಕಲ್ಪಿಸಿರುವ ರಾಜಕೀಯ ಮೀಸಲಾತಿಯಲ್ಲಿ ಮೂರನೆಯ ಒಂದು ಸ್ಥಾನವನ್ನು ಆ ಜಾತಿ, ಪಂಗಡಗಳ ಮಹಿಳೆಯರಿಗೆ ಮೀಸಲಿಡಬೇಕು.
ಮಹಿಳಾ ಮೀಸಲಾತಿ ಕುರಿತು ಸ್ಪಷ್ಟವಾಗಿ ಸಂವಿಧಾನದಲ್ಲಿಯೇ ಹೇಳುವುದರಿಂದ ನಾವು ರಾಜಕೀಯ ಮತ್ತು ಚುನಾವಣೆಯ ಸಂದರ್ಭದಲ್ಲಿ ಈ ಅಂಶಗಳನ್ನು ಗಮನದಲ್ಲಿಟ್ಟು ಕೊಂಡು ಕಾರ್ಯಾಚರಣೆಗೆ ತರಬೇಕಾಗುತ್ತದೆ. ಹೀಗಾದಾಗ ಮಾತ್ರ ಮಹಿಳಾ ಮೀಸಲಾತಿ ಯಶಸ್ವಿಯಾಗುತ್ತದೆ. ಇಲ್ಲದಿದ್ದರೆ ಇಲ್ಲ.
ಮಹಿಳಾ ಮೀಸಲಾತಿಯ ಕುರಿತಂತೆ ಅನೇಕ ಪರ-ವಿರೋಧ ವಿಚಾರಗಳು, ವಾದಗಳು ಮೇಲಿಂದ ಮೇಲೆ ಕೇಳಿಬರುತ್ತಿರುವುದು ಸಾಮಾನ್ಯ ಏಕೆಂದರೆ ಬಹಳ ವರ್ಷಗಳ ಕಾಲ ಅನುಭವಿಸಿದ ಸವಲತ್ತು ಒಂದು ರೀತಿ ಪ್ರತಿಷ್ಠೆ ಎಂದು ತಿಳಿದುಕೊಂಡ ವ್ಯಕ್ತಿಗಳು ಹೀಗೆಲ್ಲ ವಿರೋಧ ವ್ಯಕ್ತಪಡಿಸುವುದು ಸಹಜವಾಗಿದೆ. ಇದರ ಬಗ್ಗೆ ನಾವು ಹೆಚ್ಚು ತಲೆ ಕೆಡಿಸಿಕೊಳ್ಳದೆ, ಈ ಕಾರ್ಯವನ್ನು ಆದಷ್ಟು ಬೇಗ ಕಾರ್ಯ ರೂಪಕ್ಕೆ ತರುವಂತೆ ಹೋರಾಟ ಮಾಡಬೇಕಾಗುತ್ತದೆ. ಕೋಟಾದೊಳಗೊಂದು ಕೋಟಾ ಎನ್ನುವುದು ಸಹಜವಾಗಿಯೇ ಕೇಲುವುದರಲ್ಲಿ ಒಂದಿಷ್ಟು ಅರ್ಥವಿದೆ ಎಂಬುವುದನ್ನು ಮುಂದುವರಿದ ಮನಸ್ಸುಗಳು ಅರ್ಥಮಾಡಿಕೊಳ್ಳಬೇಕಾಗುತ್ತದೆ.ಅಂದರೆ ಹೆಚ್ಚಿನ ಶೇಕಡಾವಾರು ಪುರುಷರೇ ರಾಜಕೀಯ ಸವಲತ್ತುಗಳನ್ನು ಅನುಭವಿಸಿದವರು. ತಮ್ಮ ಕುಟುಂಬ, ಮನೆತನದಲ್ಲಿಯೇ ರಾಜಕೀಯವೂ ಇರಬೇಕೆಂದು ವಿಚಾರಿಸುವುದು ಕೂಪಮಂಡೂಕ ವಿಚಾರವಾಗುತ್ತದೆ.
ದೇಶ ಬಹಳ ವಿಶಾಲವಾಗಿದ್ದು, ಇಲ್ಲಿ ಲೆಕ್ಕವಿಲ್ಲದಷ್ಟು ಜಾತಿ, ಮತಗಳು ಜೀವನ ನಡೆಸುತ್ತಿರುವುದರಿಂದ ಅವರಿಗೂ ಮೀಸಲಾತಿ ಕೊಡುವುದರ ಜೊತೆಗೆ ಆಯಾ ಜಾತಿ, ಜನಾಗದ ಮಹಿಳೆಯರಿಗೂ ಮೀಸಲಾತಿ ಕೊಡುವುದರ ಮೂಲಕ ಸಂವಿಧಾನದ ಆಶಯಗಳನ್ನು ಈಡೇರಿಸುವುದು ಪ್ರಜಾಪ್ರಭುತ್ವದ ಪವಿತ್ರ ಕಾರ್ಯವಾಗಿದೆ. ಇದು ಆಯಾ ನಾಡು, ದೇಶದ ಚಿನಾಯಿತ ಸರಕಾರಗಳು ಮಡಬೇಕಾಗುತ್ತದೆ. ಪ್ರತಿಪಕ್ಷಗಳು ಬೆಂಬಲ ಸೂಚಿಸಬೇಕಾಗುತ್ತದೆ. ಅಂದಾಗ ಮಾತ್ರ ಮಹಿಳೆಯ ಸರ್ವತೋಮುಖ ಬೆಳವಣಿಗೆ ಆಗುವುದಕ್ಕೆ ಸಾಧ್ಯವಿದೆ!
ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವ ನಿಟ್ಟಿನಲ್ಲಿ ಹಲವಾರು ವೀರ ಮಹಿಳೆಯರು ಹೋರಾಟ ಮಾಡಿ ದೇಶಕ್ಕಾಗಿ ತನ್ನ ಪ್ರಾಣವನ್ನೇ ಬಲಿದಾನ ಮಾಡಿದ್ದಾರೆ. ಅಷ್ಟೇ ಅಲ್ಲದೇ ಇಂದಿರಾಗಾಂಧಿ ಕೂಡ ದೇಶವನ್ನು 17 ವರ್ಷಗಳ ಕಾಲ ಆಳ್ವಿಕೆ ಮಾಡಿ ಎಲ್ಲಾ ಜನರಿಗಾಗಿ ಹಲವಾರು ಯೋಜನೆಗಳನ್ನು ತಂದು ಸಮಾಜ ಸುಧಾರಣೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಇಂದು ಐದಾರು ರಾಜ್ಯಗಳಲ್ಲೂ ಸಹ ಮಹಿಳೆಯರು ಮುಖ್ಯಮಂತ್ರಿಗಳಾಗಿ ಆಳ್ವಿಕೆ ಮಾಡುತ್ತಿದ್ದಾರೆ. ಸಂಸತ್ ಹಾಗೂ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಮೀಸಲಾತಿ ಸಿಗಬೇಕು ಮಹಿಳಾ ಮೀಸಲಾತಿ ಅಂದರೆ ಕೇವಲ ಶ್ರೀಮಂತ ಮಹಿಳೆಯರಿಗೆ ಮಾತ್ರವಲ್ಲ ಬಡವರು, ದಾಸಿಯರಿಗೂ ಸಹ ಮೀಸಲಾತಿ ದೊರಕುವಂತಾಗಬೇಕು. ಆಗ ಪುರುಷ ಪ್ರಧಾನವಾದ ಸಮಾಜದಲ್ಲಿ ಮಹಿಳೆಯರು ಸಹ ಮುಂದೆ ಬರಲು ಸಾಧ್ಯ
ಮತದಾನದ ಹಕ್ಕಿಗಾಗಿ ಮಹಿಳೆಯರು ನಡೆಸಿದ ಹೋರಾಟದ ಫಲವಾಗಿ 1902 ರ ನಂತರ ಒಂದೊಂದೆ ದೇಶಗಳು ಮಹಿಳೆಯರಿಗೆ ಚುನಾಯಿಸುವ ಹಕ್ಕನ್ನು ನೀಡಿದವು. ಇಂಗ್ಲೇಂಡಿನಲ್ಲಿ ನಡೆದ ಕೈಗಾರಿಕ ಕ್ರಾಂತಿಯ ನಂತರ ಕಡಿಮೆ ಕೂಲಿಗೆ ಸಿಗುವ ದೊಡ್ಡ ಸಂಖ್ಯೆಯ ಮಹಿಳಾ ಶ್ರಮವನ್ನು ಕೈಗಾರಿಕೆಗಳಿಗೆ ತೊಡಗಿಸಲಾಯಿತು. ಬಿಡಿ ಬಿಡಿಯಾಗಿದ್ದ ಮಹಿಳೆಯರು ಬಟ್ಟೆ ಗಿರಣಿಯಲ್ಲಿ, ಸಿಗರೇಟ್ ಸುತ್ತುವ ಕಾರ್ಖಾನೆಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ದುಡಿಮೆಯಲ್ಲಿ ತೊಡಗಿದರು.
1908 ಮಾರ್ಚ್ 8 ಮಹಿಳಾ ಹೋರಾಟದ ಇತಿಹಾಸದಲ್ಲಿ ಒಂದು ಅವಿಸ್ಮರಣಿಯ ದಿನ. ದುಡಿತದ ಅವಧಿಯನ್ನು 10 ಗಂಟೆಗೆ ಸೀಮಿತಗೊಳಿಸಬೇಕು, ದುಡಿಮೆಗೆ ಪೂರಕವಾದ ವಾತವರಣ ಕಲ್ಪಿಸಬೇಕು, ಮತದಾನದ ಹಕ್ಕು ನೀಡಬೇಕು ಹೀಗೆ ಹಲವಾರು ಆರ್ಥಿಕ ಮತ್ತು ರಾಜಕೀಯ ಬೇಡಿಕೆಗಳನ್ನಿಟ್ಟುಕೊಂಡು ಮಾಲಿಕ ವರ್ಗದ ಅಮಾನವೀಯ ಶೋಷಣೆ ವಿರುದ್ಧ ಮಹಿಳೆಯರು ಬೀದಿಗಿಳಿದು ಹೋರಾಟ ಮಾಡಿದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಮಹಿಳೆಯರು ಅಮೆರಿಕಾದ ನ್ಯೂಯಾರ್ಕ್ ನಗರದ ರಟ್ಗೇರ್ ಚೌಕದಲ್ಲಿ ಮೆರವಣಿಗೆ ನಡೆಸಿ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಂಡರು. ಕಮ್ಯುನಿಷ್ಟ್ ನಾಯಕಿ ಕ್ಲಾರಾಜೆಟ್ಕಿನ್ ಈ ಹೋರಾಟದ ನೇತೃತ್ವ ವಹಿಸಿದ್ಧರು. 1910 ರಲ್ಲಿ ಕೂಪನ್ ಹೇಗನ್ನಲ್ಲಿ ನಡೆದ ಸೋಷಿಯಲಿಸ್ಟ್ ಮಹಿಳೆಯರ ಸಮಾವೇಶದಲ್ಲಿ 17 ದೇಶದ ಸುಮಾರು 100 ಮಹಿಳೆಯರು ಸೇರಿದ್ಧರು. ಆ ಸಮಾವೇಶದಲ್ಲಿ ಕ್ಲಾರಾಜೆಟ್ಕಿನ್ ರವರ ಪ್ರಸ್ತಾಪದಂತೆ ಮಾರ್ಚ್ 8 ನ್ನು ದುಡಿಯುವ ಮಹಿಳೆಯರ ದಿನಾಚರಣೆಯಾಗಿ ಆಚರಿಸುವ ತೀರ್ಮಾನ ಕೈಗೊಳ್ಳಲಾಯಿತು.
ಅಂತರಾಷ್ಟ್ರೀಯ ದುಡಿವ ಮಹಿಳೆಯರ ದಿನಾಚರಣೆಯಿಂದ 'ದುಡಿವ' ಪದವನ್ನು ಕಿತ್ತು ವಿಶ್ವಸಂಸ್ಥೆಯು 1975 ನ್ನು ಅಂತರಾಷ್ಟ್ರೀಯ ಮಹಿಳಾ ದಿನವೆಂದು ಘೋಷಿಸಿತು. ಇಂದು ಅಂತರಾಷ್ಟ್ರೀಯ ಮಹಿಳಾ ದಿನವನ್ನು ಎಲ್ಲಾ ದೇಶಗಳು ಒಂದು ಸಾಂಪ್ರದಾಯಿಕ ಆಚರಣೆಯಂತೆ ನಡೆಸುತ್ತಿವೆ. ದಮನದ ವಿರುದ್ಧ ಹೋರಾಡಿದ ಮಹಿಳಾ ಪರಂಪರೆಯನ್ನು ಮರೆಮಾಚಿ ಕೆಲವೇ ಮಹಿಳೆಯರ ಆರ್ಥಿಕ, ರಾಜಕೀಯ ಸಾಧನೆಗಳನ್ನು ಗುರುತಿಸಿ ಸನ್ಮಾನಿಸುವ ದಿನವನ್ನಾಗಿ ಮಹಿಳಾ ದಿನ ಆಚರಣೆಯಾಗುತ್ತಿದೆ. ಸೌಂದರ್ಯ ಸಾಧನಗಳನ್ನು ಮಾರಾಟ ಮಾಡುವ ಕಂಪನಿಗಳು ಮಹಿಳಾ ದಿನವನ್ನು ಆಚರಿಸಿ ತಮ್ಮ ಮಾರುಕಟ್ಟೆಯನ್ನು ಹೆಚ್ಚಿಸಿಕೊಳ್ಳುತ್ತಿವೆ. ಇನ್ನು ಕೆಲವು ಸಂಸ್ಥೆಗಳು ಮಹಿಳಾ ರಾಜಕಾರಣಿಗಳನ್ನು, ಉದ್ದಿಮೆಪತಿಗಳನ್ನು, ಕ್ರೀಡೆಯಲ್ಲಿ ಹಾಗೂ ಇನ್ನೀತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ಮಾಡುವ ಮೂಲಕ ಮಹಿಳಾ ದಿನವನ್ನು ಆಚರಿಸುತ್ತಿವೆ. ಕೆಲವು ಸಂಸ್ಥೆಗಳು ಮಹಿಳೆಯರಿಗೆ ಸ್ಪರ್ಧೆಯನ್ನು ಎರ್ಪಡಿಸುವ ಮೂಲಕ ಆಚರಿಸುತ್ತವೆ. ಶೋಷಣೆಯನ್ನೆ ತಮ್ಮ ಮೂಲ ಬಂಡವಾಳ ಮಾಡಿಕೊಂಡಿರುವ ಕಾಪೆರ್Çರೇಟ್ ಕಂಪನಿಗಳು ತಾವು ಉತ್ಪಾದಿಸುವ ಗೃಹಬಳಕೆ ವಸ್ತುಗಳಾದ ಮಿಕ್ಸಿ, ಗ್ರೈಂಡರ್, ಫ್ರೀಜ್, ವಾಷಿಂಗ್ ಮೆಷಿನ್ಗಳು ಮಹಿಳೆಯರ ಬದುಕನ್ನು ಬದಾಲಾಯಿಸುವ ಸಾಧನಗಳೆಂದು ಹಲವಾರು ಆಫರ್ ಗಳನ್ನು ಕೊಡುವ ಮೂಲಕ ಮಹಿಳಾ ದಿನವನ್ನು ಆವರಿಸುತ್ತವೆ. ಜೊತೆಗೆ ಗೃಹ ಬಳಕೆ ವಸ್ತುಗಳನ್ನು ಮಾರಾಟ ಮಾಡುವ ಪ್ರಚಾರಕಿಗಳಾಗಿ ಮಹಿಳೆಯರನ್ನು ಬಳಸಿಕೊಳ್ಳುತ್ತಿವೆ.
ಕಡಿಮೆ ಕೂಲಿಗೆ ತಮ್ಮ ಶ್ರಮವನ್ನು ಮಾರುತ್ತಿರುವ ಮಹಿಳೆಯರು ಅಂದು ಮುಂದಿಟ್ಟಿದ್ದ ಬೇಡಿಕೆಗಳಾದ ಕೂಲಿ ತಾರತಮ್ಯ, ಕೆಲಸದ ಸ್ಥಳದಲ್ಲಿ ಕೆಲಸಕ್ಕೆ ಪೂರಕವಾದ ವಾತವರಣವನ್ನು ಕಲ್ಪಿಸಬೇಕೆಂಬ ಮಹಿಳೆಯರ ಬೇಡಿಕೆಗಳು ಈಗಲೂ ಬೇಡಿಕೆಯಾಗೆ ಉಳಿದಿವೆ. ಮಹಿಳೆಯರ ಹೋರಾಟದ ಪರಂಪರೆಯನ್ನು ಮರೆಮಾಚಿ ಮಹಿಳೆಯರ ವ್ಯಕ್ತಿಗತ ಸಾಧನೆಯೇ ಮುಖ್ಯ ಎಂದು ಬಿಂಬಿಸುವಲ್ಲಿ ರಾಜಕೀಯ, ಆರ್ಥಿಕ, ಧಾರ್ಮಿಕ ಸಂಸ್ಥೆಗಳು, ಮುಖ್ಯವಾಗಿ ಕಾಪೋ್ರೇಟ್ ಸಂಸ್ಥೆಗಳು ಯಶಸ್ವಿಯಾಗಿವೆ. ಮಹಿಳೆ ಸುಂದರವಾಗುವುದು ಹೇಗೆ ಎನ್ನುವ ಜಾಹಿರಾತುಗಳೆ ಇವರ ಬಂಡವಾಳವಾಗಿದೆ.
ಮಹಾನಗರಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ದುಡಿಯುತ್ತಿರುವ ಗಾರ್ಮೆಂಟ್ಸ್ ಮಹಿಳೆಯರು, ಐಟಿ ಬಿಟಿ ಯಲ್ಲಿ ಕೆಲಸ ಮಾಡುವ ಮಹಿಳೆಯರು, ಕಾಲ್ ಸೆಂಟರ್ ಮಹಿಳೆಯರು, ಬೀಡಿ ಕಾರ್ಮಿಕರು ಕೆಲಸದ ಅತಿಯಾದ ಒತ್ತಡದಿಂದ ಬಳಲುತ್ತಿದ್ದಾರೆ. ಕಡಿಮೆ ವೇತನ ಪಡೆಯುತ್ತಿದ್ದಾರೆ. ಲೈಂಗಿಕ ಕಿರುಕುಳ, ಅತ್ಯಚಾರ, ಮಾಲಿಕರ ದೌರ್ಜನ್ಯಗಳಿಗೆ ಒಳಗಾಗುತ್ತಿದ್ದಾರೆ. ಈ ರೀತಿ ಒತ್ತಡಕ್ಕೆ ಸಿಕ್ಕಿ ದೈಹಿಕವಾಗಿ, ಮಾನಸಿಕವಾಗಿ ಕುಗ್ಗುವ, ಅತ್ಯಚಾರಕ್ಕೊಳಗಾಗುವ, ಕೊಲೆಯಾಗುವ ಮಹಿಳೆಯರ ವಿಚಾರದಲ್ಲಿ ಕಾನೂನುಗಳು ನಾಮಕಾವಸ್ಥೆಯಾದರೆ, ಸರ್ಕಾರ ನಿರ್ಲಕ್ಯ ತಾಳಿದೆ.
ಮಹಿಳೆಯರ ಸಬಲಿಕರಣ, ಮಹಿಳಾವರ್ಷ, ಮಹಿಳಾ ದಿನಚರಣೆ ಇಂತಹ ಘೋಷಣೆಗಳಿವೆ. ಆದರೆ ಪ್ರತಿಭೆಯಲ್ಲಿ , ಸಾಮಥ್ರ್ಯದಲ್ಲಿ ಪುರುಷರಿಗೆ ಸರಿಸಾಟಿಯಾಗಿ ಮಹಿಳೆಯರು ಸ್ಪರ್ಧಿಸುತ್ತಿದ್ದರೂ, ಮಹಿಳೆಯರನ್ನು ಲೈಂಗಿಕ ವಸ್ತುಗಳಂತೆ, ಮಕ್ಕಳನ್ನು ಹೆರುವ ಯಂತ್ರದಂತೆ, ಸಂಪ್ರದಾಯ ಸಂಸ್ಕೃತಿಯನ್ನು ಉಳಿಸಬೇಕಾದ ವಕ್ತಾರಳಂತೆ ಬಿಂಬಿಸಲಾಗುತ್ತಿದೆ. ಆದರೆ ಮತ್ತೊಂದು ಕಡೆ ಮಹಿಳೆಯರನ್ನು ಅರೆ ನಗ್ನವಾಗಿ ಜಾಹಿರಾತುಗಳಲ್ಲಿ, ಸಿನಿಮಾಗಳಲ್ಲಿ ತೋರಿಸಿ ಅವಳ ದೇಹವನ್ನೆ ಮಾರಾಟದ ತಂತ್ರವಾಗಿ ಬಳಸಲಾಗುತ್ತಿದೆ. ಇತ್ತೀಚೆಗಂತೂ ಆಧುನಿಕ ತಂತ್ರಜ್ಞಾನದ ಫಲವಾಗಿ ಇಂಟರ್ನೆಟ್ , ಮೊಬೈಲ್ ಅಪ್ಲಿಕೇಷನ್ ಗಳಲ್ಲಿ ಹರಿದಾಡುವ ಮೇಸೆಜ್, ನೀಲಿ ಚಿತ್ರಗಳು ಮಹಿಳೆಯರ ವ್ಯಕ್ತಿತ್ವವನ್ನು ಇನ್ನೂ ಗೌಣ ಗೊಳಿಸುವುದಲ್ಲದೆ ಯುವ ಜನಾಂಗ ಹಾದಿ ತಪ್ಪಲು ಪ್ರೇರಣೆಯಾಗುತ್ತಿದೆ. ಅತ್ಯಚಾರದ ಪ್ರಮಾಣ ಈ ಮಟ್ಟಕ್ಕೆ ಹೆಚ್ಚಲು ಇದು ಮುಖ್ಯ ಕಾರಣವಾಗಿದೆ. ಸಿನಿಮಾ, ಮಾಧ್ಯಮಗಳಲ್ಲಿ ಹೆಣ್ಣನ್ನು ಕೀಳಾಗಿ ಚಿತ್ರಿಸಲಾಗುತ್ತದೆ. ಹೆಣ್ಣು ಸಂಸ್ಕೃತಿಯ ಪ್ರತಿಬಿಂಬ ಎಂದು ಎಲ್ಲಾ ಹೊಣೆಗಾರಿಕೆಯನ್ನು ಅವಳ ಮೇಲೆ ಹೇರುವ ಸಾಮಾಜಿಕ, ಧಾರ್ಮಿಕ ಸಂಸ್ಥೆಗಳು ಒಂದೆಡೆಯಾದರೆ ಕೆಲವರಿಗೆ ಮಹಿಳೆಯನ್ನು ಅರೆನಗ್ನವಾಗಿ ತೋರಿಸುವುದೆ ಹೆಚ್ಚು ಆದಾಯ ತರುವ ಉದ್ಯಮವಾಗಿದೆ.
ರಾಜಕೀಯ ಕ್ಷೇತ್ರದಲ್ಲಿ ಶೇಕಡಾ 50 ರ ಮಾತಂತಿರಲಿ 33% ಶೆಕಡಾಕ್ಕೂ ಹೋರಾಟ ನಡೆಯುತ್ತಿದೆ. ದಕ್ಷಿಣ ಏಷ್ಯಾದ ಯಾವುದೇ ದೇಶದ ರಾಜಕೀಯ ಪ್ರಾತಿನಿಧ್ಯದಲ್ಲೂ ಮಹಿಳೆಯರ ಸ್ಥಾನ 10% ದಾಟಿಲ್ಲ. ದುಡಿಮೆಯಲ್ಲಿ 60 ಶೆಕಡಾಕ್ಕಿಂತಾ ಹೆಚ್ಚು ಪಾಲಿದ್ದರೂ ಕೇವಲ 10% ದಷ್ಟು ಆದಾಯ ಪಡೆದು, ಕೇವಲ 1% ಆಸ್ತಿಯ ಒಡೆತನ ಹೊಂದಿದ್ದಾರೆ. ಹೀಗೆ ಎಲ್ಲಾ ಸಂಕಷ್ಟಗಳಿಗೂ ಮಹಿಳೆಯರು ಸುಲಭವಾಗಿ ದಾಳವಾಗುತ್ತಿರುವುದು ಸಮಾಜದಲ್ಲಿ ಪುರುಷ ಮೇಲೂ ಮಹಿಳೆ ಕೀಳೇಂಬ ಮೌಲ್ಯದ ಕಾರಣಕ್ಕೆ. ಪ್ರಪಂಚ ಮಟ್ಟದಲ್ಲಿ ಈ ಮೌಲ್ಯಕ್ಕೆ 2500 ಕ್ಕಿಂತ ಹೆಚ್ಚು ವರ್ಷಗಳ ಇತಿಹಾಸವಿದೆ. ಭಾರತದಲ್ಲಿ ಆರ್ಯನ್ನರ ಪ್ರವೇಶದೊಂದಿಗೆ ವರ್ಗ ಸಮಾಜ, ಜಾತಿ ಸಮಾಜ ರೂಪುಗೊಂಡು ಮಾತೃಪ್ರಧಾನತೆಯ ಸಮಾಜ ಪುರುಷಾಧಿಪತ್ಯ ಮೌಲ್ಯಗಳ ಸಮಾಜವಾಗಿ ರೂಪು ಗೊಂಡಿತು. ಆ ನಂತರದಲ್ಲಿ ಕುಟುಂಬ, ಸರ್ಕಾರ, ಕಾನೂನು, ಮಾಧ್ಯಮ, ಆಥೀ್ಕ ವ್ಯವಸ್ಥೆ, ಶಿಕ್ಷಣ ಕ್ಷೇತ್ರ ಹೀಗೆ ಎಲ್ಲಾ ಸಂಸ್ಥೆಗಳು ಲಿಂಗತಾರತಮ್ಯ ಎನ್ನುವುದು ಸಮಾಜದ ಸಹಜ ವಿದ್ಯಮಾನ ಎನ್ನುವ ಮಟ್ಟಿಗೆ ಅಧಿಕೃತ ಮಾಡುತ್ತಾ ಬಂದಿವೆ. ಮೊದಲಿಗೆ ಮಹಿಳೆಯ ಶ್ರಮಶಕ್ತಿಯ ಮೇಲೆ, ಮರು ಉತ್ಪಾದನ ಶಕ್ತಿಯ ಮೇಲೆ, ಅವಳ ಲೈಂಗಿಕತೆಯ ಮೇಲೆ,
ಚಲನೆಯ ಮೇಲೆ, ಆಸ್ತಿಯ ಹಕ್ಕಿನ ಮೇಲೆ, ಹೀಗೆ ನಿಧಾನವಾಗಿ ನಿಯಂತ್ರಣ ಸಾಧಿಸುತ್ತಾ ಬರಲಾಯಿತು.
ಕ್ರಮೇಣ ಮಹಿಳೆಯರು ಸಹನೆಯ ಪರಿಧಿಯನ್ನು ದಾಟಿ, ವೈಚಾರಿಕವಾಗಿ ತಮ್ಮ ಬಂಧನದ ಬದುಕಿನ ಬಗ್ಗೆ, ಸಿಗಬೇಕಾದ ಹಕ್ಕಿನ ಬಗ್ಗೆ ಜಾಗೃತರಾಗಿ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ದುಡಿಮೆಗೆ ತಕ್ಕ ಫಲ, ಕಾನೂನಿನ ಸೌಲಭ್ಯಗಳನ್ನು ಹೋರಾಟದಿಂದಲೇ ಪಡೆದಿದ್ದಾರೆ. 21 ನೇ ಶತಮಾನದಲ್ಲಿ
ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಅವಕಾಶಗಳನ್ನು ಪಡೆಯುತ್ತಿದ್ದಾರೆ. ಉನ್ನದ ಹುದ್ದೆಗಳಲ್ಲಿದ್ದಾರೆ. ಪ್ರಭುತ್ವದ ನೀತಿಯ ಬದಲಾವಣೆಯ ಕಾರಣಕ್ಕೆ ರಾಕೀಯದಲ್ಲೂ ಪ್ರಾತಿನಿಧ್ಯ ಸಿಗುತ್ತಿದೆ. ಶಿಕ್ಷಣ, ಉದ್ಯೋಗ, ಆರ್ಥಿಕ ಸ್ವಾತಂತ್ರ್ಯ ಎಲ್ಲದರಲ್ಲೂ ಗಣನೀಯ ಬದಲಾವಣೆ ಬಂದಿದೆ. ಆದರೂ ಈ ಬದಲಾವಣೆಯೊಂದಿಗೆ ಅವಳ ಸಮಸ್ಯೆಗಳ ಸ್ವರೂಪವು ಬದಲಾಗುತ್ತಿದೆ. ಮತ್ತು ಹೆಚ್ಚು ಹೆಚ್ಚು ಸಂಕೀರ್ಣವಾಗುತ್ತಿದೆ. ಮನೆಯ ಒಳಗೂ ಮತ್ತು ದುಡಿಮೆಯ ಸ್ಥಳದಲ್ಲೂ ಅವಳು ನಿರ್ವಹಿಸುವ ಬೇಕಾದ ಜವಾಬ್ದಾರಿ ಅವಳ ಒತ್ತಡವನ್ನು ಹೆಚ್ಚಿಸುತ್ತಿದೆ. ಮಹಿಳೆ ಎಲ್ಲೂ ಸುರಕ್ಷಿತಳಲ್ಲ ಎನ್ನುವ ವಾತವರಣವನ್ನು ನಿರ್ಮಿಸಲಾಗುತ್ತಿದೆ.
ಮನೆಯಲ್ಲಿ, ಮಠದಲ್ಲಿ, ಶಾಲೆಯಲ್ಲಿ, ಕಾನೂನು, ಪೋಲಿಸು ಎಲ್ಲಾ ಕಡೆ ಅವಳ ಮೇಲೆ ಅತ್ಯಚಾರ ಹಾಗೂ ದೌರ್ಜನ್ಯಗಳು ನಡೆಯುತ್ತಿವೆ. ಇತ್ತೀಚೆಗಂತೂ ಮುಗ್ದ ಮಕ್ಕಳಿಂದ ಹಿಡಿದು ಮುದುಕಿಯರ ಮೇಲೂ ಅತ್ಯಚಾರ ಪ್ರಕರಣಗಳು ಹೆಚ್ಚುತ್ತಿವೆ. ಮಹಿಳೆಯರ ಮೇಲೆ ನಡೆಯುವ ಎಲ್ಲಾ ದೌರ್ಜನ್ಯಕ್ಕಿಂತಲೂ ಅತ್ಯಚಾರ ಭೀಕರವಾದುದು. ಅತ್ಯಚಾರ ಎನ್ನುವುದು ಮಹಿಳೆಯನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗಿಸುತ್ತದೆ. ಅವಳ ವ್ಯಕ್ತಿತ್ವವನ್ನು ಬಟ್ಟೆಯಲ್ಲೂ ಬೆತ್ತಲೆಯಾಗಿ ನೋಡುವ ಮೃಗೀಯ ಮನಸ್ಥಿತಿಯಾಗಿದೆ. ಇಂತಹ ಸಂದರ್ಭದಲ್ಲಿ ಮಹಿಳಾ ದಿನಾಚರಣೆಯನ್ನು ಕೇವಲ ಸಾಂಪ್ರದಾಯಿಕ ಆಚರಣೆಯಾಗಿಸದೇ ದಮನದ ವಿರುದ್ದದ ಸಮಾನತೆಯ ಬದುಕಿನ, ಆರೋಗ್ಯಕರ ಸಮಾಜಕ್ಕಾಗಿನ ಹೋರಾಟದ ದಿನವನ್ನಾಗಿ ನಡೆಸಬೇಕಾಗಿದೆ. ಒಂದು ಮನೆಯ ಹೆಣ್ಣು ಅತ್ಯಚಾರಕ್ಕೊಳಗಾದರೆ ಆ ಮನೆಯಲ್ಲಿರುವ ಅಣ್ಣ, ತಮ್ಮ, ತಂದೆ ಎಲ್ಲರಿಗೂ ಮಾನಸಿಕ ಒತ್ತಡ ನಿರ್ಮಾಣವಾಗುತ್ತದೆ. ಹಾಗಿರುವಾಗ ಅತ್ಯಚಾರ ಮುಕ್ತ, ಶೋಷಣೆ ರಹಿತ ಸಮಾಜ ಸ್ತ್ರೀ ಮತ್ತು ಪುರುಷರಿಬ್ಬರ ಆದ್ಯತೆಯಾಗಿದೆ. ಆರೋಗ್ಯಕರ ಸಮಾಜಕ್ಕಾಗಿನ ಹೋರಾಟವನ್ನು ಮಹಿಳೆಯರು ಮತ್ತು ಪುರುಷರು ಸೇರಿಯೇ ನಡೆಸಿದಾಗ ಮಾತ್ರ ಪ್ರತಿ ಮಹಿಳಾ ಸಬಲೀಕರಣ ಸಾಧ್ಯವಾಗುತ್ತದೆ.
ರಂಜಿತಾ ಕಾರ್ಯಪ್ಪ
9481771851