ಹರಿದಾಸ ಪಿತಾಮಹಶ್ರೀ ಶ್ರೀಪಾದರಾಜರು


"ನಮಃ ಶ್ರೀಪಾದರಾಜಾಯನಮಸ್ತೇ ವ್ಯಾಸಯೋಗಿನೇ|
ನಮಃ ಪುರಂದರಾರ್ಯಾಯವಿಜಯರಾಜಾಯ ನಮಃ|
                
ಹರಿದಾಸಪಿತಾಮಹ” ರೆಂಬ ಗೌರವಕ್ಕೆ ಪಾತ್ರರಾದಶ್ರೀಪಾದರಾಜರ ಸಾಧನೆಯನ್ನು ಇತರ ದಾಸಶ್ರೇಷ್ಠರುಗಳೆಲ್ಲರೂ ಇವರನ್ನು ಹಲವು ಬಗೆಯಾಗಿ ಹೊಗಳಿದ್ದಾರೆ ಕಾರಣದಿಂದಲೇ ಇರಬಹುದು ಪರಂಪರೆಯಿಂದ ಬಂದ  ಮೇಲಿನ ಶ್ಲೋಕದಲ್ಲಿ ಧೃವಾಂಶ ಸಂಭೂತರೆಂದು ಪ್ರಖ್ಯಾತರಾಗಿರುವ ಶ್ರೀಪಾದರಾಜರನ್ನು ಅಭಿನಂದಿಸಿ ಪುರಸ್ಕರಿಸಲಾಗಿದೆಕರ್ಣಾಟಕದಲ್ಲಿ 13ನೇ ಶತಮಾನದಲ್ಲಿ ಶ್ರೀಮಧ್ವಾಚಾರ್ಯರು ಬಿತ್ತಿದ ವೈಷ್ಣವ ಭಕ್ತಿ ಬೀಜ ನರಹರಿ ತೀರ್ಥರ ಕಾಲದಲ್ಲಿ ಮೊಳಕೆಯೊಡೆಯಿತಾದರೂ ಅದು ಚಿಗುರಿ ಹೆಮ್ಮರವಾಗತೊಡಗಿದ್ದು ಶ್ರೀಪಾದರಾಜರ ಕಾಲದಿಂದಲೇಇಂದು ನಾವು ಬಹುವಾಗಿ ಕೊಂಡಾಡುವಸಾಹಿತ್ಯಕ್ಷೇತ್ರಕ್ಕೆ ಕನ್ನಡ ನೀಡುವ ಕೊಡುಗೆಗಳಲ್ಲೊಂದು ಎಂದು ಹೆಮ್ಮೆಯಿಂದ ಬೀಗುವ ಹರಿದಾಸ ಸಾಹಿತ್ಯ ಲಭ್ಯವಾದುದು ಶ್ರೀಪಾದರಾಜರು ಪಟ್ಟ ಶ್ರಮದಿಂದ ಇಟ್ಟ ದಿಟ್ಟ ಹೆಜ್ಜೆಯಿಂದ.
                
ಶ್ರೀಪಾದರಾಜರ ಶಿಷ್ಯ ಶ್ರೇಷ್ಠರಾದ ವ್ಯಾಸರಾಯರು ತಮ್ಮ ಗುರುಗಳನ್ನು ಕುರಿತು ರಚಿಸಿರುವ ಅನೇಕ ರಚನೆಗಳುವಾದಿರಾಜರ ಕೀರ್ತನೆಗಳು ಹಾಗೂ ಸಂಸ್ಕøತದ ಶ್ರೀಪಾದರಾಜ ಗುರುರಾಜ ಸ್ತೋತ್ರಮತ್ತು ವಿಜಯದಾಸರು ರಚಿಸಿರುವ ಶ್ರೀಪಾದರಾಜರ ಸುಳಾದಿ ಮುಂತಾದವುಗಳು ಶ್ರೀ ಪಾದರಾಜರ ಬದುಕಿನ ಮೇಲೆ ನಿಶ್ಚಿತ ಬೆಳಕನ್ನು ಬೀರುತ್ತವೆಅಂತೆಯೇ ಶ್ರೀನಿಧಿತೀರ್ಥರ “ಶ್ರೀಪಾದರಾಜಾಷ್ಟಕ” ಮತ್ತು ಭೀಮಾಚಾರ್ಯರು ರಚಿಸಿರುವ “ಶ್ರೀ ಪೂರ್ಣಬೋಧ ಗುರುವಂಶ ಕಲ್ಪತರು” ಮುಂತಾದ ಸಂಸ್ಕø ಕೃತಿಗಳೂ ಸಹ ಅವರ ಯತ್ಯಾಶ್ರಮದ ನಂತರದ ವಿಶೇಷ ಸಂಗತಿಗಳನ್ನು ವರ್ಣಮಯವಾಗಿ ಚಿತ್ರಿಸಿವೆಶ್ರೀಪಾದರಾಜರು ಸನ್ಯಾಸ ಸ್ವೀಕರಿಸುವ ಮುಂಚಿನ ಪ್ರಸಂಗವೊಂದನ್ನು ಬೇಲೂರು ಕೇಶವದಾಸರು ಸುದೀರ್ಘವಾಗಿಆಕರ್ಷಕವಾಗಿ ತಮ್ಮ “ಕರ್ನಾಟಕ ಭಕ್ತಚರಿತೆಯಲ್ಲಿ ಚಿತ್ರಿಸಿದ್ದಾರೆ.
                
ದಾಸಸಾಹಿತ್ಯ ಸಾಮ್ರಾಜ್ಯ ಸ್ಥಾಪಕರಾದ ಶ್ರೀಪಾದರಾಜರ ಪೂರ್ವಾಶ್ರಮದ ಹೆಸರು “ಲಕ್ಷ್ಮೀನಾರಾಯಣ” ಎಂಬುದಾಗಿತ್ತುತಂದೆ ಶೇಷಗಿರಿಯಪ್ಪ ಹಾಗೂ ತಾಯಿ ಗಿರಿಯಮ್ಮಇವರ ಪುತ್ರನಾಗಿ ಚನ್ನಪಟ್ಟಣ ತಾಲೂಕಿನ ಅಬ್ಬೂರಿನಲ್ಲಿ ಕ್ರಿ..1404ರಲ್ಲಿ ಜನಿಸಿದರುಅವರ ಸ್ಥಿತಿ-ಗತಿ ಅಷ್ಟಕಷ್ಟೆಯಾಗಿತ್ತುಒಮ್ಮೆ ಸ್ವರ್ಣವರ್ಣತೀರ್ಥ ಎಂಬ ಸ್ವಾಮಿಗಳು ಸಂಚಾರಮಾರ್ಗವಾಗಿ ಅಬ್ಬೂರಿನ ಬಳಿ ಬಂದಾಗ ದನಕರುಗಳನ್ನು ಹೊಡೆದುಕೊಂಡು ಹೋಗುತ್ತಿದ್ದ  ಬಾಲಕನನ್ನು ಕಂಡು "ಮಗು ಅಬ್ಬೂರು ಇನ್ನೂ ಎಷ್ಟು ದೂರವಿದೆಯಪ್ಪಎಂದು ಕೇಳಲುಬಾಲಕನು, “ಇಗೋ ನನ್ನನ್ನು ನೋಡಿದನಗಳನ್ನು ನೋಡಿಸೂರ್ಯನನ್ನು ನೋಡಿಎಷ್ಟು ದೂರವೋ ಗೊತ್ತಾಗುತ್ತದೆ” ಎಂದು ಚಮತ್ಕಾರವಾಗಿ ಉತ್ತರಿಸಿದ  ಬಾಲಕನಲ್ಲಿ ವಿಶಿಷ್ಟ ಪ್ರತಿಭೆಯನ್ನು ಗುರುತಿಸುತ್ತಾರೆಮುಂದೆ ಸ್ವರ್ಣವರ್ಣತೀರ್ಥರ ಆಶ್ರಯದಲ್ಲಿ ಲಕ್ಷ್ಮೀನಾರಾಯಣರ ಬ್ರಹ್ಮೋಪನಯನವಿದ್ಯಾಭ್ಯಾಸ ಇವುಗಳ ನಂತರ ಸಂನ್ಯಾಸ ದೀಕ್ಷೆಯನ್ನು ಕೊಟ್ಟು ಪೀಠಾಧಿಕಾರಕ್ಕೆ ತಕ್ಕ ವೇದಾಂತ ವ್ಯಾಸಂಗಕ್ಕಾಗಿ ಲಕ್ಷ್ಮೀನಾರಾಯಣತೀರ್ಥರನ್ನು ಸುಪ್ರಸಿದ್ಧರಾದ ರಾಘವೇಂದ್ರ ಮಠದ ಪೂರ್ವಪೀಳಿಗೆಯ ವಿಬುಧೇಂದ್ರ ತೀರ್ಥರಲ್ಲಿಗೆ ಕಳುಹಿಸಿಕೊಟ್ಟರು

ಇಬ್ಬರೂ ಸಂಚಾರ ಮಾಡುತ್ತ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಕೊಪ್ಪರ ಶ್ರೀಲಕ್ಷ್ಮೀನರಸಿಂಹಸ್ವಾಮಿ ಕ್ಷೇತ್ರಕ್ಕೆ ಬರುತ್ತಾರೆಅದೇ ಸಮಯದಲ್ಲಿ ಶ್ರೀ ಉತ್ತರಾದಿ ಮಠದ ರಘುನಾಥತೀರ್ಥರು ಆಗಮಿಸಿದ್ದರುಶ್ರೀ ವಿಭುಧೇಂದ್ರರು ವಿದ್ಯಾಪಾರಂಗತರೆನಿಸಿದ್ದ ಶ್ರೀರಘುನಾಥರಿಗೆ ತಮ್ಮ ಶಿಷ್ಯನ ಪರಿಚಯ ಮಾಡಿಕೊಟ್ಟು ಅವನ ವಿದ್ಯಾಪರಿಶ್ರಮವನ್ನು ಅವಲೋಕಿಸಿ ಆಶಿರ್ವದಿಸಬೇಕೆಂದು ಕೋರಿದಾಗಶ್ರೀ ಟೀಕಾಚಾರ್ಯರ “ನ್ಯಾಯಸುಧೆಎಂಬ ಗ್ರಂಥದ ವಾಕ್ಯವೊಂದನ್ನು ವಿಮರ್ಶಿಸಲು ಹೇಳಲು ಒಂದು ವಾಕ್ಯವನ್ನು ಆಧರಿಸಿ ಇಡೀ ಗ್ರಂಥವನ್ನೇ ವಿಶ್ಲೇಸಿದ ಇವರ ಪಾಂಡಿತ್ಯಕ್ಕೆ ಬೆರಗಾಗಿ ಶ್ರೀ ರಘುನಾಥರು ಮೆಚ್ಚುಗೆಯಿಂದ "ನಾವೂ ಬರೇ ಪಾದಂಗಳುತಾವಾದರೋ ಶ್ರೀ ಪಾದರಾಜರುಎಂದು ಮನಃಪೂರ್ವಕವಾಗಿ ನುಡಿಯುತ್ತಾರೆಅಂದಿನಿಂದ ಶ್ರೀಲಕ್ಷ್ಮೀನಾರಾಯಣತೀರ್ಥರು “ಶ್ರೀಪಾದರಾಜರಾದರು.
                
ಕೆಲದಿನಗಳಲ್ಲೆ ಸ್ವರ್ಣವರ್ಣತೀರ್ಥರು ವೃಂದಾವನಸ್ಥರಾಗುತ್ತಾರೆಪದ್ಮನಾಭತೀರ್ಥರ ಮಠದ ಸರ್ವಾಧಿಪತ್ಯವೂ ಶ್ರೀಪಾದರಾಜರದಾಯಿತುಶ್ರೀರಂಗದಲ್ಲಿ ಹಲವು ವರ್ಷಗಳಿದ್ದುಸಂಚಾರ ಹೊರಟು ಮುಳುಬಾಗಿಲಿಗೆ  ಬಂದು ಅಲ್ಲಿನ ಮಹತ್ವವರಿತು ಅಲ್ಲಿಯೇ ಮಠವನ್ನು ಸ್ಥಿರವಾಗಿ ಸ್ಥಾಪಿಸಿದರುಮುಳುಬಾಗಿಲು ವಿಜಯನಗರದ ಅರಸರ ಅಧಿಪತ್ಯಕ್ಕೆ ಒಳಪಟ್ಟು ತುಂಬಾ ಪ್ರಸಿದ್ಧವಾಗಿತ್ತುಕನ್ನಡದಲ್ಲಿ ಸಾಮಾನ್ಯ ಜನರಿಗೆ ತಿಳಿಯುವಂತೆ ಭಾಗವತದ ಕಥೆಗಳುಮಹಾಭಾರತರಾಮಾಯಣಗಳು ಇವೇ ಮೊದಲಾದವನ್ನು ಕನ್ನಡೀಕರಿಸಿ ಹಾಡುಗಳನ್ನಾಗಿ ಪರಿವರ್ತಿಸಿ ಪೂಜಾ ಸಮಯದಲ್ಲಿ ಭಾಗವತರ ಮುಖೇನ ಹಾಡಿಸುವ ಪದ್ಧತಿಯನ್ನು ಜಾರಿಗೆ ತಂದರು. “ರಂಗ ವಿಠಲ” ಅಂಕಿತದೊಂದಿಗೆ ಅನೇಕ ಕೀರ್ತನೆಗಳನ್ನು ರಚಿಸಿದರುಸ್ವತಃ ಭ್ರಮರಗೀತೆವೇಣುಗೀತೆಗೋಪಿಗೀತೆಗಳಂಥ ಭಕ್ತಿಗೀತೆಗಳನ್ನು ಹಾಗೂ ಶ್ರೀ ವಾಯುದೇವರ ಮೂರು ಅವತಾರಗಳನ್ನು ವರ್ಣಿಸುವ “ಶ್ರೀಮಧ್ವನಾಮ” ವನ್ನು ರಚಿಸಿದ್ದಾರೆ.               
                
ಇಂಥಹ ಮಧ್ವನಾಮದ ಪಠಣದಿಂದ ಸಿಗುವ ಫಲವನ್ನು ಜಗನ್ನಾಥದಾಸರು ತಮ್ಮ ಫಲಸ್ತುತಿಯಲ್ಲಿ “ಪುತ್ರರಿಲ್ಲದವರು ಸತ್ಪುತ್ರರೈದುವರು ಸರ್ವತ್ರದಲಿ ದಿಗ್ವಿಜಯವಹುದು ಸಕಲ ಶತ್ರುಗಳು ಕೆಡುವರು ಅಪಮೃತ್ಯು ಬರಲಂಜುವದು ಸೂತ್ರನಾಮಕನ ಸಂಸ್ತುತಿ ಮಾತ್ರದಿ”  ಬಣ್ಣಿಸುತ್ತಾರೆಶ್ರೀಪುರಂದರದಾಸರ ಸುಪುತ್ರರಾದ ಮಧ್ವಪತಿದಾಸರು ತಮ್ಮ ಉಗಾಭೋಗದಲ್ಲಿ “ವರಧ್ರುವನ ಅವತಾರ ಶ್ರೀಪಾದರಾಯರು” ಎನ್ನುತ್ತಾರೆಇವರು ಧ್ರುವರಾಜನ ಅಂಶಜರುಇವರ ಮಹಿಮೆ ಅಪಾರವಾದುದುಅನೇಕ ಉಗಾಭೋಗಗಳುಕೀರ್ತನೆಗಳುಸುಳಾದಿಗಳುವೃತ್ತನಾಮದಂಡಕಗಳೆಂಬ ಪ್ರಕಾರಗಳನ್ನು ಮಾಡಿದ್ದಾರೆಶ್ರೀಪಾದರಾಜರ ಕನ್ನಡ ಕೃತಿಗಳಲ್ಲಿ ಪದಲಾಲಿತ್ಯಅಲಂಕಾರ ಪ್ರೌಢಿಮೆಶೃಂಗಾರಶಾಂತಿಭಕ್ತಿರಸಗಳ ನಿರೂಪಣೆ ಇವು ಓದುಗರ ಚಿತ್ತವನ್ನೂ ಹೃದಯವನ್ನು ಆಕರ್ಷಿಸುವವುಮತ್ತು ಸುಪ್ರಸಿದ್ಧವಾಗಿವೆ.
                
ಶ್ರೀಪಾದರಾಜರ ಮಹಿಮೆ ಅಪಾರವಾದುದುಶ್ರೀಪಾದರಾಜರು ಎಲ್ಲಿದ್ದರೂ ಅರವತ್ನಾಲ್ಕು ಬಗೆಯ ಪದಾರ್ಥಗಳನ್ನೇ ಮಾಡಿಸಿ ನೈವೇದ್ಯ ಮಾಡಿ ಭೀಕ್ಷಾಸ್ವೀಕಾರ ಮಾಡುತ್ತಿದ್ದರುಭೀಮರಥೀತೀರದಲ್ಲಿ ಭೂಗರ್ಭದಲ್ಲಡಗಿದ್ದ ಸ್ವರ್ಣಪೀಠಿಕೆಯೊಂದನ್ನು ಸ್ವಪ್ನ ಸೂಚನೆಯಿಂದ ತೆಗೆಸಿ ಅದರಲ್ಲಿ ದೊರೆತ ರಂಗವಿಠಲದೇವರನ್ನು ಪೂಜೆಗೆ ಇಟ್ಟುಕೊಂಡರುಕೋಲಾರ ಜಿಲ್ಲೆಯ ಮುಳುಬಾಗಿಲಿನಲ್ಲಿ ಶ್ರೀಪಾದರಾಜರು ಭಕ್ತಜನರ ಕೋರಿಕೆಯಂತೆ ಗಂಗೆಯನ್ನು ಸ್ತೋತ್ರ ಮಾಡಿ ನೃಸಿಂಹ ತೀರ್ಥದಲ್ಲೇ ಆಕೆ ಅವತರಿಸುವಂತೆ ಮಾಡಿ ಎಲ್ಲರಿಗೂ ಗಂಗಾ ಸ್ನಾನವನ್ನು ಮಾಡಿಸಿದರುಹೀಗೆ ಇವರ ಮಹಿಮೆಗಳ ಪಟ್ಟಿಯನ್ನು ಮಾಡುತ್ತಾ ಹೋದರೆ ಮುಗಿಯುವದಿಲ್ಲ.
                
ಜ್ಯೇಷ್ಠ ಮಾಸ ಬಂತೆಂದರೆಶ್ರೀಪಾದರಾಜರ ದಿವ್ಯಪಾದ ಸ್ಮರಣೆ ತಪ್ಪದೆ ಬರುತ್ತದೆಪ್ರಾತಃಕಾಲದಲ್ಲಿ ಇವರ ಸ್ಮರಣೆ ಬಂತೆಂದರೆ ಸಾಕು ಸೊಗಸಾದ ಊಟ ಅಂದು ಸಿದ್ಧಇದು ಎಲ್ಲರ ಅನುಭವದ ಮಾತುಶ್ರೀ ವಿಜಯದಾಸರುಇವರ ವಿಷಯದಲ್ಲಿ ಒಂದು ಸುಳಾದಿಯಲ್ಲಿ ಆಡಿರುವ ಸವಿಮಾತುಗಳುಮನಃ ಪ್ರಸನ್ನತೆಯನ್ನೂಇವರನ್ನು ಆಶ್ರಯಿಸದೇ ಇರುವನು ನರಪಶುವೆಂಬ ಜ್ಞಾನವನ್ನೂ ಒತ್ತಿ ತೋರಿಸುತ್ತವೆಶ್ರೀಪಾದರಾಜರ ಕುರಿತಾದ ಸುಳಾದಿಯಲ್ಲಿ “ಇವರ ಪ್ರಸಾದವಾದರೆ ವ್ಯಾಸಮುನಿರಾಯ ಕವಿರಾಯ ಪುರಂದರದಾಸರಾಯರ ಕರುಣ ತಾನಾಗಿ ಸಿದ್ಧಿಪುದು.”  “ದ್ವಿಪಾದ ಪಶುಕಾಣೋ  ಮುನಿಯ ನಂಬದವ” ಎನ್ನುತ್ತಾರೆ.
                                
ಕ್ರಿ. 1502ರಲ್ಲಿ ವೃಂದಾವನಸ್ಥರಾದ ಶ್ರೀಪಾದರಾಜರು ಭಾಗವತ ಧರ್ಮ ಕನ್ನಡ ಭಕ್ತಿ ಸಾಹಿತ್ಯಗಳಿಗೆ ಜೀವತುಂಬಿ ಧೃವತಾರೆಯಂತೆ ಬಾಳಿಬೆಳಗಿದ್ದಾರೆಗುಣನಿಧಿ ಶ್ರೀಪಾದರಾಜರನ್ನು ಜ್ಞಾನಶ್ರೇಷ್ಠರ ಗುಣಗಾನವು ಜ್ಞಾನಜ್ಯೇಷ್ಠರಿಂದ ಮಾಡಲ್ಪಟ್ಟರೇನೇ ಚಂದಅದನ್ನು ನುಡಿದವನಿಗೆ ದೊರೆಯುವದು ಆನಂದಎಂದು ಜ್ಞಾನಿಗಳು ಹೇಳುತ್ತಾರೆಪ್ರಕೃತ “ಶ್ರೀಪಾದರಾಯ ಗುರುವೇ” ಎಂದು ಪ್ರಾರಂಭವುಳ್ಳ ಸುಳಾದಿ ಶ್ರೀ ವಿಜಯರಾಯರ ಕೃತಿಯನ್ನು ಓದಿ ನೋಡುವಾಗ ಶ್ರೀಪಾದರಾಜರ ಒಂದೊಂದು ಗುಣವೂ ರಮಾರಮಣನಿಗೆ ಎಷ್ಟು ಪ್ರೀತಿ ಎಂಬುದು ಅರ್ಥವಾಗದೆ ಇರದು.
                
ಜ್ಯೇಷ್ಠ ಶುದ್ಧ ಚತುರ್ದಶಿದಿನ  ಪುಣ್ಯಾತ್ಮರ ಪುಣ್ಯದಿನಕೋಲಾರ ಜಿಲ್ಲೆಯ ಮುಳುಬಾಗಿಲಿನಲ್ಲಿ ಶ್ರೀಪಾದರಾಜರ ಆರಾಧನೆಯನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತದೆಶ್ರೀಪಾದರಾಜರನ್ನು ನೆನೆಸಿದವರು ಧನ್ಯಅವರ ಸ್ಮರಣೆ ನಿರಂತರವಾಗಿರಲಿಶ್ರೀ ಪಾದರಾಜರ ಮಧುರ ಸ್ಮರಣೆಗಾಗಿ ನಮಗೆ ನಿಲುಕಿದ ಅವರ ಮಾಡಿದ ಕೃತಿ ಬರೆದು-ಓದಿ-ಆನಂದಿಸೋಣ.
ಉಗಾಭೋಗ
ಬಲ್ಲವನು ಎಲ್ಲವನು ಹರಿಯಿರಲು ಭಜಿಸದೆ|
ಕ್ಷುಲ್ಲದೇವರ ಬೇಡಿ ಸುಖವ ಬಯಸುವೆ ನೀನು|
ಕಲ್ಲುಗೋವಿನ ಪಾಲ ಕರುವು ಬಯಸಿದಂತೆ
ಹಲ್ಲು ಹೋಹದನರಿಯ ಅಕ್ಕಟಕಟ
ಬಲ್ಲಿದ ದೈವ ಶ್ರೀರಂಗ ವಿಠಲನು
ಕೈವಲ್ಯವನೇ ಕೊಟ್ಟು ಸಂತೈಸುವನು ಭಜಿಸೋ||”

ಎಂದ ಅವರ ಹಿತೋಪದೇಶವನ್ನು ಮನದಟ್ಟು ಮಾಡಿಕೊಂಡು-
                       
ಕಲಿಕಾಲಕೆ ಸಮಯುಗವಿಲ್ಲವಯ್ಯ|
ಕಲುಷಹರಿಸಿ ಕೈವಲ್ಯವೀವುದಯ್ಯ
ಸಲೆ ನಾಮ ಕೀರ್ತನೆ ಸ್ಮರಣೆ ಸಾಕಯ್ಯ
ಸ್ಮರಿಸಲು ಸಾಯುಜ್ಯ ಪದವೀವುದಯ್ಯ
ಬಲವಂತ ಶ್ರೀರಂಗವಿಠಲನ ನೆನೆದರೆ ಕಲಿಯುಗವೇ ಕೃತಯುಗವಾಗುವುದಯ್ಯ.”

ಎಂದು ಅವರಿತ್ತ ಧೈರ್ಯದಿಂದ ಬಾಳೋಣ.
||ಶ್ರೀ ಗು..||

Please watch the video
Sri sripadaraja Mutt, Moola Brindavana, Mulbagilu


ಸುಮಾ ಸಂಜೀವ ಕೆ